(www.vknews.in)
ನಾವು ಅಳಲು ಸಾಧ್ಯವಾಗದಿದ್ದಾಗ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಿಲ್ಲದಾಗ ಯಾವಾಗ ನಮ್ಮಿಂದೇನೂ ಆಗುದಿಲ್ಲವೆಂದರಿತಾಗ… ಬಾಲ್ಯತನ ನೆನಪಿಗೆ ಬರುತ್ತದೆ
ಚಿಂತೆ ನೋವುಂಟುಮಾಡಿದಾಗ ನಮ್ಮ ದೇಹವನ್ನು ಏನೋ ಕಾಡುತ್ತಿದೆ ಎಂದು ನಮಗೆ ಅನಿಸಿದಾಗ ಬಾಲ್ಯತನ ನೆನಪಿಗೆ ಬರುತ್ತದೆ..
ನಾ ನುಚ್ಚುನೂರಾದಾಗ ನನ್ನವರು ಅಸಮಾಧಾನಗೊಂಡಾಗ ಕನಸುಗಳು ಕಾಡಿದಾಗ ಬಾಲ್ಯತನ ನೆನಪಿಗೆ ಬರುತ್ತದೆ…
ಮಕ್ಕಳಾಗಿಯೇ ಇರಲು ಸಾಧ್ಯವಿಲ್ಲ ದೊಡ್ಡವರಾಗಿಯೇ ಇರಲೂ ಸಾಧ್ಯವಿಲ್ಲ ಎಲ್ಲೂ ನಿಲ್ಲಲು ಸಾಧ್ಯವಿಲ್ಲ ಎಂದರಿತಾಗ…. ಬಾಲ್ಯತನ ನೆನಪಿಗೆ ಬರುತ್ತದೆ..
ಯಾರನ್ನೂ ಸಹಿಸಲು ಸಾಧ್ಯವಿಲ್ಲ ಒಬ್ಬಂಟಿಯಾಗಿ ಬದುಕಲು ಸಾಧ್ಯವಿಲ್ಲ ಯಾರಿಗೂ ಹೇಳಲೂ ಆಗುತ್ತಿಲ್ಲ ಎನ್ನುವಾಗ., ಬಾಲ್ಯತನ ನೆನಪಿಗೆ ಬರುತ್ತದೆ…
– ಅಶ್ತೋಶ್ ರೋಣ (ಚಲನಚಿತ್ರ ನಟ) ಕನ್ನಡಕ್ಕೆ – ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.