ಮುದ್ದೇಬಿಹಾಳ(ವಿಶ್ವಕನ್ನಡಿಗ ನ್ಯೂಸ್): ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಆದ್ಯತೆ ನೀಡಲಿ, ಮುಸ್ಲಿಂ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಭವಿಷ್ಯದ ಜೀವನ ರೂಪಿಸುವ ಶಿಕ್ಷಣವನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಸಂಗೀತಾ ನಾಡಗೌಡ ಹೇಳಿದರು.
ಪಟ್ಟಣದ ಮಹಿಬೂಬ ನಗರದ ಮಕ್ಕಾ ಹಾಲ್ ನಲ್ಲಿ ಭಾನುವಾರ ಮಹಮ್ಮದಿಯಾ ನಾಥ್ ಕಮೀಟಿ ನೇತೃತ್ವದಲ್ಲಿ ಆಯೋಜಿಸಿದ್ದ ನಾಥ್ ಮತ್ತು ಇಸ್ಲಾಮಿಕ್ ಕ್ವಿಜ್ ಸ್ಪರ್ದಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಪುರಸಭೆ ಅಧ್ಯಕ್ಷ ಪ್ರತಿಭಾ ಅಂಗಡಗೇರಿ ಮಾತನಾಡಿ, ಮಕ್ಕಳಿಗೆ ಮಾತೃಭಾಷೆ ಜೊತೆಗೆ ಮನೆಯಲ್ಲಿ ಭಾಷೆಯನ್ನು ತಾಯಂದಿರು ಕಲಿಸಿಕೊಡಬೇಕು ಎಂದರು. ಅಧ್ಯಕ್ಷತೆ ಮೌಲಾನಾ ಮಹಮ್ಮದ್ ಹುಸೇನ್ ಉಮ್ರಿ,ಮೌಲಾನಾ ನಿಸಾರ ಅಹ್ಮದ ಜಾಮಯಿ, ಪುರಸಭೆ ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ,ಸೈಯದ್ ಮುಸ್ತಫಾ ಖಾದ್ರಿ, ಬೀಳಗಿಯ ಎಸ್.ಎಲ್.ಒ ಅಧಿಕಾರಿಗಳಾದ ಎಂ.ಎ.ಎಸ್. ಬಾಗವಾನ,ಲಾಲಸಾಬ ನಾಯ್ಕೋಡಿ,ಇಂಡಿ ನಾಥ್ ಕಮಿಟಿ ಶಾಖೆಯ ಮೊಹ್ಮದ ಗುಲಾಮ,ನವಾಜ ಖಾನ್ ಪಠಾಣ, ಗುತ್ತಿಗೆದಾರರಾದ ರುದ್ರಗೌಡ ಅಂಗಡಗೇರಿ, ಕ್ವಿಜ್ ಮಾಸ್ಟರ್ ಗಳಾದ ಅಬ್ದುಲ್ ನಬಿ ಜಮಾದಾರ,ಸೈಫ್ ಅವಟಿ,ಮುಜಮ್ಮಿಲ್ ಮುಲ್ಲಾ, ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಕಯ್ಯುಂ ಚೌದ್ರಿ,ಅಲ್ಲಾಭಕ್ಷ ವಾಲೀಕಾರ, ಇನ್ನಿತರರು ಇದ್ದರು. ಎಚ್.ಆರ್ ಬಾಗವಾನ್ ನಿರೂಪಿಸಿದರು. ಡಿ.ಎಂ.ಚೌದ್ರಿ ಸ್ವಾಗತಿಸಿದರು.
ಫಲಿತಾಂಶ : ನಾಥ್ ನಲ್ಲಿ ಪ್ರಥಮ ಸ್ಥಾನವನ್ನು ಮಮ್ಮದಿಯಾ ದಾರುಲ್ ಉಲುಮನ ವಿದ್ಯಾರ್ಥಿನಿ ಆಸಿಫಾ ಖತಿಬ್ ಪಡೆದರೆ, ದ್ವಿತೀಯ ಸ್ಥಾನ ವನ್ನು ನಾಲತವಾಡ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ಯಾಸ್ಮಿನ್ ಮಕಾಂದಾರ್ ಪಡೆದರು ,ಸರಕಾರಿ ಉರ್ದು ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸ್ವಾಲಿಹಾ ದೇಸಾಯಿ ಮೂರನೇ ಸ್ಥಾನ ಪಡೆದರು. ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತಾಳಿಕೋಟಿಯ ಐಡಿಯಲ್ ಸ್ಕೂಲ್ನ ತಸ್ಮೀಯಾ ಕೆಂಭಾವಿ, ಸಮ್ರಿನ್ ಖಾಂಜಾದ ಪಡೆದರೆ ದ್ವಿತೀಯ ಸ್ಥಾನವನ್ನು ತಾಳಿಕೋಟಿ ರಿಲಯನ್ಸ್ ಸ್ಕೂಲ್ ನ ಹಾಸಿಂಬಿ ಕೆಂಭಾವಿ, ಗುಲನಾಜ ವಠಾರ್ ಪಡೆದಕೊಂಡರು. ತೃತಿಯ ಸ್ಥಾನವನ್ನು ಮುದ್ದೇಬಿಹಾಳ ಅಂಜುಮನ್ ಹೈಸ್ಕೂಲ್ ಮದಿಯಾ ಮಮದಾಪೂರ, ಮುರ್ತುಜಬಿ ದಖನಿ ಪಡೆದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.