ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ತನ್ನ ಕುಟುಂಬ ಪಾಲನೆಗೆ ಕೆಲಸ ಹರಸಿ ಬಂದು ಅರಬರ ಮರುಭೂಮಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕೊಡಗಿನ ಮಡಿಕೇರಿ ತಾಲೂಕು ಕುಂಜಿಲ ಗ್ರಾಮದ ಅನಿವಾಸಿ ಜನರು 16ವರ್ಷಗಳ ಹಿಂದೆ ಸ್ಥಾಪಿಸಿದ ಸಂಸ್ಥೆಯಾಗಿರುತ್ತೆ ಕುಂಜಿಲ ಪೈನರಿ ಯುಎಇ ಸಮಿತಿ, ಈ ಸಮಿತಿ ಮೂಲಕ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ಊರಿನ ಬಡವರಿಗೆ ಆಹಾರ ಕಿಟ್, ಬಡ ರೋಗಿಗಳ ಆಸ್ಪತ್ರೆ ಖರ್ಚಿಗೆ ಹಣ ಸಹಾಯ ಸೇರಿ ಹತ್ತು ಹಲವು ಮಾನವೀಯ ಸೇವೆ ಮತ್ತು ಊರಿಗೆ ಬೇಕಾದ ಮಸೀದಿ, ಕಟ್ಟಡ ಮತ್ತು ಇನ್ನಿತರ ಹಲವು ಯೋಜನೆಗಳನ್ನು ಕಾರ್ಯರೂಪ ಮಾಡಿ ಮುಗಿಸಿದ್ದಾರೆ, ಕುಂಜಿಲ ಪೈನೆರಿ ಜಮಾತ್ ಅಧೀನದಲ್ಲಿ ಮುಖ್ಯ ಸಮಿತಿ ಕಾರ್ಯಾಚರಿಸುತ್ತಿದ್ದು ಸೌದಿ ಅರೇಬಿಯಾ, ಬೆಂಗಳೂರಿನಲ್ಲೂ ಘಟಕಗಳನ್ನು ಹೊಂದಿದೆ.
ಪೈನೆರಿ ಸಮಿತಿಯ ಯುಎಇ ಘಟಕದ ವತಿಯಿಂದ ಈ ವರ್ಷ ಸಹ ಪ್ರವಾದಿ ಮೊಹಮ್ಮದ್ ಸ ವ ಅವರ ಜನ್ಮ ದಿನದ ಪ್ರಯುಕ್ತ ಮೀಲಾದ್ ಆಚರಣೆಯನ್ನು ಮತ್ತು ಸ್ವಲಾತ್ ವಾರ್ಷಿಕವನ್ನು ಅಕ್ಟೊಬರ್ 15ರಂದು ದೇರಾ ದುಬೈಯಲ್ಲಿರುವ ಕಾಸರಗೋಡು ರೆಸ್ಟುರೆಂಟ್ ಸಭಾಂಗಣದಲ್ಲಿ ಆಚರಿಸಲಾಯಿತು, ರಾತ್ರಿ 12ಕ್ಕೆ ಮುನೀರ್ ಮಿಸ್ಬಾಯ್ ಮತ್ತು ಸಯ್ಯದ್ ಮುಹನ್ನದ್ ಹುದವಿ ಅಲ್ ಹೈದ್ರೂಸಿ ತಂಗಳ್ ನೇತೃತ್ವದಲ್ಲಿ ಮೌಲೀದ್ ಪಾರಾಯಣ ಮತ್ತು ಬುರ್ದಾ ಮುಂತಾದ ಆದ್ಯಾತ್ಮಿಕ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದಲ್ಲಿ ತೌಫೀಕ್ ಹುದವಿ ಆಲ್ ಮಾಲಿಕಿ ಮುಖ್ಯ ಧಾರ್ಮಿಕ ಪ್ರವಚನ ನಡೆಸಿದರು, ಹಾಗೆ ಸಹದಿಯ ದುಬೈ ಉಸ್ತಾದ್ ನಾಸಿರ್ ಸಹದಿ, ಮರ್ಕಜ್ ಕೊಡಗು ದುಬೈ ಉಸ್ತಾದ್ ಹಂಝ ಸಖಾಫಿ ಮತ್ತು ಇಬ್ರಾಯಿಮ್ ಉಸ್ತಾದ್ ಧಾರ್ಮಿಕ ಹಿತವಚನ ನುಡಿದರು, ನಂತರ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೈನೆರಿ ಯುಎಇ ಸಮಿತಿಯ ಅಧ್ಯಕ್ಷರಾದ ನಾಸಿರ್ ಅರೆವಲ್ಫಿಲ್ ಅವರು ನಿರ್ವಹಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ಮಾಜಿ ಅಧ್ಯಕ್ಷರಾದ ಹುಸೈನ್ ಪತಂಗೋಡ್ ಅವರು ನೆರವೇರಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ನಾಸಿರ್ ಪಯಡತಂಡ ಅವರು ನಿರ್ವಹಿಸಿದರು.
ತಾಯಿನಾಡಿನಿಂದ ಕಾರ್ಯಕರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂಜಿಲ ಜಮಾತ್ ಮಾಜಿ ಅಧ್ಯಕ್ಷರು, ಕೊಡುಗೈ ದಾನಿ ಮತ್ತು ಕರ್ನಾಟಕ ಮುಸ್ಲಿಂ ಜಮಾತ್ ಮಡಿಕೇರಿ ತಾಲೂಕು ಸಮಿತಿ ಸದಸ್ಯರಾದ ಕುಂಜಿಲ ಊರಿನ ಹುಸೈನ್ ಹಾಜಿ ಮಕ್ಕಿ ಅವರಿಗೆ ಪೈನೆರಿ ಯುಎಇ ಆಡಳಿತ ಮಂಡಳಿ ಸದಸ್ಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌವಿಸಿದರು, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕೆಸಿಎಫ್ ಯುಎಇ ಅಧ್ಯಕ್ಷರಾದ ಜಲೀಲ್ ನಿಜಾಮಿ ಎಮ್ಮೆಮಾಡು, ಕೊಡಗು ಸುನ್ನಿ ವೆಲ್ಫೇರ್ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು ಮತ್ತು ಇತರ ಗಣ್ಯರು ಆಗಮಿಸಿ ಸಮಿತಿ ಕಾರ್ಯ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸ್ದರು, ಸಮಿತಿ ಸದಸ್ಯರಾದ ನಾಸಿರ್ ಪಯಡತಂಡ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು, ಸಯ್ಯದ್ ಮುಹನ್ನದ್ ಹುದವಿ ಅಲ್ ಹೈದ್ರೂಸಿ ತಂಗಳ್ ಅವರ ಪ್ರಾರ್ಥನೆಯೊಂದಿಗೆ ಆದ್ಯಾತ್ಮಿಕ ಸಭೆಯನ್ನು ಕೊನೆಗೊಳಿಸಿ ವಂದನಾರ್ಪಣೆಯನ್ನು ಸಮಿತಿಯ ಕಾರ್ಯದರ್ಶಿ ಜಮಾಲ್ ಕುಂಡಂಡ ಅವರು ನೆರವೇರಿಸಿ ಆಹಾರ ಭೋಜನೆ ನಂತರ ಸಮಿತಿಯ ವಾರ್ಷಿಕ ಖರ್ಚು ವೆಚ್ಚ ಮತ್ತು ಮುಂದಿನ ಯೋಜನೆಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ ಕುಂಜಿಲ ಗ್ರಾಮದಿಂದ ಆಗಮಿಸಿದ ಹೊಸ ಸದಸ್ಯರುಗಳನ್ನು ಸಮಿತಿಗೆ ಸೇರಿಸಲಾಯಿತು.
2022-23ನೇ ಸಾಲಿನ ಗೌರವಾಧ್ಯಕ್ಷರಾಗಿ ಮೌಲಾನಾ ಇಬ್ರಾಯಿಮ್ ಉಸ್ತಾದ್ ಬಾರಿಕೆ, ಅಧ್ಯಕ್ಷರಾಗಿ ನಾಸಿರ್ ಅರೆವಲ್ಫಿಲ್, ಉಪಾಧ್ಯಕ್ಷರಾಗಿ ಶಂಸುದ್ದೀನ್ ಪೇನಥೋಡ್, ಖಜಾಂಜಿಯಾಗಿ ಅಶ್ರಫ್ ಕುಂಡಂಡ ಮತ್ತು ಕಾರ್ಯದರ್ಶಿಯಾಗಿ ಜಮಾಲ್ ಕುಂಡಂಡ ಅವರು ಮರುನೇಮಕವಾದರು, ಎಲ್ಲಾ ತಿಂಗಳು ಸಮಿತಿಯ ಅಧೀನ ಸಂಸ್ಥೆಯಾದ ಸ್ವಲಾತ್ ಸಮಿತಿ ವತಿಯಿಂದ ನಡೆಯುವ ಸ್ವಲಾತ್ ಕಾರ್ಯಕ್ರಮದ ಸಮಿತಿ ಅಧ್ಯಕ್ಶರಾಗಿ ಹ್ಯಾರಿಸ್ ಥರ್ಮಲ್, ಕಾರ್ಯದರ್ಶಿಯಾಗಿ ಶಂಸುದ್ದೀನ್ ಮಕ್ಕಿ ಅವರು ನೇಮಕವಾದರು.
ವರದಿ : ರಫೀಕಲಿ ಕುಂಜಿಲ-ದುಬೈ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.