ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕದ ವಿವಿಧ ಸುನ್ನೀ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬೃಹತ್ ಮೀಲಾದ್ ಕಾರ್ಯಕ್ರಮ ದಿನಾಂಕ 22-10-2022 ಶನಿವಾರ ರಾತ್ರಿ 9ಗಂಟೆಗೆ ದುಬೈ ದೇರಾ ನಖೀನಲ್ಲಿರುವ ಆಫ್ರಿಕಾನ ಹೋಟೆಲ್ ಸಭಾಂಗಣದಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವ ವಿಧ್ವಾಂಸ ಸುಪ್ರಸಿದ್ಧ ವಾಗ್ಮಿ ಮುಸ್ತಫಾ ನಈಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮತ್ತು ಬಶೀರ್ ಸಖಾಫಿ ತಂಡದಿಂದ ಬುರ್ದಾ ಅಲಾಪನೆ ನಅತೇ ಶರೀಫ್ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲರನ್ನು ಸಂಘಟಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಈ ಬೃಹತ್ ಮೀಲಾದ್ ಕಾರ್ಯಕ್ರಮವನ್ನು ದಾರುಲ್ ಇರ್ಷಾದ್ ಮಾಣಿ, ಅಲ್ ಮದೀನಾ ಮಂಜನಾಡಿ, ಅಲ್ ಮಾದೀನತುಲ್ ಮುನವ್ವರ ಮೂಡಡ್ಕ, ದಾರುಲ್ ಅಶ್’ಅರಿಯ್ಯಾ ಸುರಿಬೈಲು, ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ, ಮುಈನುಸ್ಸುನ್ನ ಹಾವೇರಿ, ವಾದಿ ಇರ್ಫಾನ್ ಸಬರಬೈಲು, ಮರ್ಕಝುಲ್ ಹುದಾ ಕುಂಬ್ರ, ಮನ್ಶರ್ ಗೇರುಕಟ್ಟೆ, ದಾರುನ್ನಜಾತ್ ಕೊಡುಂಗೈ, ಮಲಜಹ್ ಉಜಿರೆ ಜಂಟಿ ಆಶ್ರಯದಲ್ಲಿ ನಡೆಸುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.