ಮಂಗಳೂರು(www.vknews.in): ಅಲ್ ಮಸ್ಜಿದುರ್ರಹ್ಮಾನಿಯಾ ಮತ್ತು ಅಲ್ ಮದ್ರಸತುರ್ರಹ್ಮಾನಿಯ ಎಸ್ .ಎಚ್ .ನಗರ , ದಯಂಬು -ಕಣ್ಣೂರು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಾಭಾಗಿತ್ವದಲ್ಲಿ ಮರ್ಹೂಂ ಸತ್ತಾರ್ ದಯಂಬು ಮತ್ತು ಮರ್ಹೂಂ ಹಮೀದ್ ಉಸ್ತಾದ್ ಕಡಬ ಹಾಗೂ ಮರ್ಹೂಂ ಹಾಜಿ.ಎಸ್.ಡಿ ಅಬ್ದುಲ್ ರಹಿಮಾನ್ ಎಸ್. ಎಚ್. ನಗರ . ದಯಂಬು ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ದಿನಾಂಕ :23 ಅಕ್ಟೋಬರ್ 2022, ಆದಿತ್ಯವಾರದಂದು ಅಲ್ ಮದ್ರಸತುರ್ರಹ್ಮಾನಿಯ, ಎಸ್, ಎಚ್ . ನಗರ. ದಯಂಬು, ಕಣ್ಣೂರು ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರ ವರೆಗೆ ನಡೆಯುವ ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಯಶಸ್ವಿಗೊಳಿಸುವಂತೆ ಅಲ್ ಮಸ್ಜಿದುರ್ರಹ್ಮಾನಿಯಾ ದಯಂಬು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅದಲ್ಲದೇ ಅದೇ ದಿನ ಬೆಳಿಗ್ಗೆ ಗಂಟೆ 11:30ರಿಂದ ಬೃಹತ್ ಮೌಲೂದ್ ಮಜ್ಲಿಸ್ ನಡೆಯಲಿದ್ದು, ಅಸರ್ ನಮಾಝ್ ಬಳಿಕ ಮದ್ರಸ ವಿದ್ಯಾರ್ಥಿನಿಯರ ಕಲೋತ್ಸವ ನಡೆಯಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.