(www.vknews.in) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಾಲ್ ಪಡ್ಪು ಇಲ್ಲಿಯ ನೂತನ ಎಸ್ಡಿಎಂಸಿ ಸಮಿತಿ ರಚನೆಯು ಇಂದು ಶಾಲಾ ಸಭಾಂಗಣದಲ್ಲಿ ಜರಗಿತು.
2011 ರಲ್ಲಿ 75 ಮಕ್ಕಳು ಇರುವ ಶಾಲೆಯಲ್ಲಿ ಹಲವು ರೀತಿಯ ಮೂಲಭೂತ ಸೌಕರ್ಯಗಳ ಕೊರತೆ ಸ್ವಾಭಾವಿಕವಾಗಿ ಎಲ್ಲಾ ಸರಕಾರಿ ಶಾಲೆಗಳ ಹಾಗೆ ಈ ಶಾಲೆಯಲ್ಲಿ ಕೂಡ ಇತ್ತು. ಆ ಸಮಯದಲ್ಲಿ ಇಚ್ಛಾಶಕ್ತಿಯನ್ನು ತುಂಬಿ ಕೊಂಡು ಒಂದು ಯುವಕ ಅಧ್ಯಕ್ಷನಾಗಿ ಬಂದು ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ತನ್ನ ಸಮಯವನ್ನು ಕೊಟ್ಟಾಗ, ವರ್ಷಂಪ್ರತಿ ಮಕ್ಕಳ ಸಂಖ್ಯೆಯೂ ಜಾಸ್ತಿ ಆಗಿ ಈಗ 170 ಕ್ಕೆ ಬಂದು ನಿಂತಿದೆ,
ಅದಲ್ಲದೆ ಸತತ ಪ್ರಯತ್ನದಿಂದ ಇಲಾಖೆಯಿಂದ ಆಂಗ್ಲ ಮಾಧ್ಯಮ ತರಗತಿ ತೆರೆಯಲು ಅನುಮತಿಯನ್ನು ಪಡೆದು ಕೊಂಡು ಯಾವುದೇ ಖಾಸಗಿ ಶಾಲೆಗಳಿಗೆ ಕೊರತೆ ಇಲ್ಲದೆ ರೀತಿಯಲ್ಲಿ ನಿಭಾಯಿಸುತ್ತಾ ಹೋಗುತ್ತಿದ್ದಾರೆ.
ಶಾಲೆಗೆ ಇಲಾಖೆಯ ಸಮವಸ್ತ್ರ ದೊಂದಿಗೆ ಶಾಲೆಗೆ ಪ್ರತ್ಯೇಕವಾದ ಸಮವಸ್ತ್ರ, ಐಡಿ,ಬೆಲ್ಟ್, ಸಾಮಾನ್ಯ ಬಡವರ ಮಕ್ಕಳು ಮಾತ್ರ ಇರುವ ಕಾರಣ ದಾನಿಗಳ ಸಹಕಾರದಿಂದ ವರ್ಷಂಪ್ರತಿ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ, ಬಂಡೆ ಕಲ್ಲು ಗಳಿಂದ ಕೂಡಿದ ಸ್ಥಳವನ್ನು ಸಮತಟ್ಟು ಮಾಡಿ ಮಕ್ಕಳಿಗೆ ಆಟೋಟಕ್ಕಾಗಿ ಸಮತಟ್ಟಾದ ಆಟದ ಮೈದಾನ ಹೀಗೆ ಹಲವು ರೀತಿಯ ಮಕ್ಕಳ ಸ್ನೇಹಿಯಾದ ಕಾರ್ಯಕ್ರಮಗಳ ಆಯೋಜನೆಯ ಕಾರಣದಿಂದ ,
ಇಂದು ನಡೆದ ಪೋಷಕರ ಸಭೆಯಲ್ಲಿ 5 ನೇ ಬಾರಿ ಅವಿರೋಧವಾಗಿ ಅದ್ಯಕ್ಷರಾಗಿ ಆಯ್ಕೆ ಆಗಿರುವ ಎಸ್ಡಿಎಂಸಿ ಸಮನ್ವಯ ವೇದಿಕೆಯ ಮಂಗಳೂರು ತಾಲೂಕು ಅಧ್ಯಕ್ಷರಾದ ಅಕ್ಬರ್ ಶರೀಫ್ ರವರನ್ನು ಎಸ್ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಹಾಗೂ ಜಿಲ್ಲಾ ಘಟಕವು ಅಭಿನಂದಿಸಿ , ಇನ್ನೂ ಕೂಡ ಮಕ್ಕಳಿಗೆ ಪೂರಕವಾಗಿ ಕೆಲಸ ಮಾಡಲು ಶುಭ ಹಾರೈಸುತ್ತಾ ಇದೆ,
ಅದಲ್ಲದೆ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ರಾಗಿ ಮೇರಿ ಡಿಸೋಜ, ಸದಸ್ಯರಾಗಿ ಗಂಗವ್ವ,ಯಶೋದಾ ,ತಾಯಿರ,ಅಬ್ದುಲ್ ರಹಿಮಾನ್ ,ಇಕ್ಬಾಲ್,ಸಮೀರ್,ಅಬ್ದುಲ್ ಮಜೀದ್,ಮೊಯಿದಿನ್ ,ಸಲೀಂ ,ಹಿದಾಯತುಲ್ಲ,ಅಬ್ದುಲ್ ಮಜೀದ್, ಆರಿಫ,ರಮ್ಲತ್,ಇಶ್ರತ್, ಸೌದ,ಆಯಿಷಾ ಬಾನು ರವರು ಆಯ್ಕೆ ಆಗಿರುತ್ತಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.