(www.vknews.in) ಮಂಗಳೂರುಃ ಕರಾವಳಿಯಲ್ಲಿ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಶ್ಲಾಘಿಸಿ ಎಎಪಿ ಸಮಾವೇಶದಲ್ಲಿ ಮಾತನಾಡಿದ ನಾರಾಯಣ ಪ್ರಭು ಅವರಿಗೆ ಜೀವ ಬೆದರಿಕೆ ನೀಡಿದ ಮಂಗಳೂರು ನಗರಪಾಲಿಕೆ ಉಪಮೇಯರ್ ಗಂಡನ ವಿರುದ್ಧ ಆಮ್ ಆದ್ಮಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು, ಮಂಗಳೂರಿಂತಹ ಸುಶಿಕ್ಷಿತ ನಾಗರಿಕರ ಊರಿನಲ್ಲಿ ನಾರಾಯಣ ಪ್ರಭು ಅವರಂತಹ ಹಿರಿಯರ ಮನೆಗೆ ನುಗ್ಗಿ ಹೊಡೆದು ಹಾಕುತ್ತೇವೆ ಎಂದು ಜೀವ ಬೆದರಿಕೆ ಘಟನೆಗಳು ನಡೆದಾಗ ನಾಗರಿಕರು ಕೇವಲ ಸಿಟ್ಟಾದರೆ ಸಾಲದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು. ನಾರಾಯಣ ಪ್ರಭು ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು. ಅವರ ಬೆಂಬಲಕ್ಕೆ ಪಕ್ಷ ಸದಾ ನಿಲ್ಲುತ್ತದೆ ಎಂದರು. ಜನಸಂಘದ ಕಾಲದಿಂದ ಕಾರ್ಯಕರ್ತರಾಗಿದ್ದ ನಾರಾಯಣ ಪ್ರಭು ಅವರು ವಾಸಿಸುವ 41ನ್ ವಾರ್ಡ್ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಆಗಿದ್ದು ಅದನ್ನು ಬಗೆಹರಿಸುವಲ್ಲಿ ಆಡಳಿತ ನಡೆಸುವವರಿಗೆ ಯೋಗ್ಯತೆ ಇಲ್ಲ ಎಂದವರು ಹೇಳಿಕೆ ನೀಡಿರುವುದಕ್ಕೆ ಪ್ರತಿಯಾಗಿ ಉಪಮೇಯರ್ ಪೂರ್ಣಿಮಾ ಅವರ ಗಂಡ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗುವುದು. ಕಾರ್ಪೋರೇಟರ್ ಆಗಿ ಕೆಲಸ ಮಾಡಲು ಆಗುವುದಿಲ್ಲವಾದರೆ ಮನೆಯಲ್ಲಿ ಇರಬಹುದಲ್ಲ, ಯಾಕೆ ಕಾರ್ಪೋರೇಟರ್ ಆಗಬೇಕಾಗಿತ್ತು. ಕಾರ್ಪೋರೇಟರ್ ಗಂಡನು ಹೆಂಡತಿಯ ಪರವಾಗಿ ಓಡಾಡುವ ವ್ಯವಸ್ಥೆ ಬೇಕೆ ಎಂದು ನಾರಾಯಣ ಪ್ರಭು ಅವರು ಎಎಪಿ ಸಮಾವೇಶದಲ್ಲಿ ಹೇಳಿದ್ದರು. ಇಂತಹ ಅನ್ಯಾಯಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ಕಾನೂನು ಬದ್ಧವಾಗಿ ಹೋರಾಟ ನಡೆಸುತ್ತದೆ ಎಂದು ರೆಡ್ಡಿ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.