(www.vknews.in) ದಿನಾಂಕ 11-11-2022 ನೇ ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಕನಕ ಜಯಂತಿ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು ಹಾಗೂ ಪೌರರಕ್ಷಣಾ ಪಡೆ ದ.ಕ ಜಿಲ್ಲೆ ಇದರ ಮುಖ್ಯ ಪಾಲಕರಾದ ಡಾ ಮುರಲೀ ಮೋಹನ್ ಚೂಂತಾರು ಅವರು ಕನಕ ದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುದರ ಮೂಲಕ ಕನಕ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಕುಲಕುಲವೆಂದು ಹೊಡೆದಾಡುವ ಜನರಿಗೆ ತಮ್ಮ ಪ್ರಕಾರ ವೈಚಾರಿಕತೆ ಚಿಂತನೆಯಿಂದ ಎಚ್ಚರಿಸಿ, ಜಾತಿ ವ್ಯವಸ್ಥೆಯ ವಿರುದ್ದ ಕನಕ ದಾಸರು ಏಕಾಂಗಿಯಾಗಿ ಹೋರಾಡಿದರು ಮತ್ತು ಮನಷ್ಯ ಕುಲಕಿಂತ ಶೇಷ್ಠ ಕುಲ ಇನ್ನೊಂದಿಲ್ಲ ಎಂದು ಪ್ರತಿಪಾದಿಸಿದ ಕನಕ ದಾಸರು ಎಲ್ಲಾ ಕಾಲದಲ್ಲೂ ಸಲ್ಲುವ ಮಹನ್ ಚೇತನ ಎಂದು ಡಾ ಚೂಂತಾರು ಅಭಿಪ್ರಾಯಪಟ್ಟರು. ಈ ಸಮಯದಲ್ಲಿ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ, ಹಿರಿಯ ಗೃಹರಕ್ಷಕರಾದ ಸುನೀಲ್, ದೀವಕರ್, ರಮೇಶ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.