ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ತನ್ನ ಮಗಳನ್ನು ಆತ್ಮಹತ್ಯೆಯ ನಾಟಕವಾಡಿಸಿ ಕೊಂದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕಂಡು ಕೇಳರಿಯದ ಕೊಲೆ ನಡೆದಿದೆ. ನವೆಂಬರ್ 6 ರಂದು ನಾಗ್ಪುರ ನಗರದ ಕಾಲಮ್ಮನಾದಲ್ಲಿ 16 ವರ್ಷದ ಬಾಲಕಿ ತನ್ನ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಘಟನೆಯ ನಂತರ ಬಾಲಕಿಯ ಕೊಠಡಿಯಲ್ಲಿ ದೊರೆತ ಐದು ಆತ್ಮಹತ್ಯೆ ಪತ್ರಗಳ ಆಧಾರದ ಮೇಲೆ ಮಲತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜ ಮತ್ತು ಅಜ್ಜಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ವೇಳೆ ಪೊಲೀಸರು ಬಾಲಕಿಯ ತಂದೆಯ ಫೋನ್ ಪರಿಶೀಲಿಸಿದಾಗ ಸತ್ಯ ಹೊರಬಿದ್ದಿದೆ.
ಆತನ ಬಳಿಯಿಂದ ಬಾಲಕಿ ಆತ್ಮಹತ್ಯೆ ನಾಟಕವಾಡುತ್ತಿರುವ ಛಾಯಾಚಿತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲಕಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡೋಣ ಎಂದು ಸುಳ್ಳುಹೇಳಿ ಮೊದಲು ಆಕೆಯ ಸಂಬಂಧಿಕರ ವಿರುದ್ಧ ಆತ್ಮಹತ್ಯೆ ಪತ್ರ ಬರೆಸಿದ್ದಾನೆ. ನಂತರ ತಂದೆಯ ಸೂಚನೆಯಂತೆ ಬಾಲಕಿ ಸ್ಟೂಲ್ ಮೇಲೆ ಹತ್ತಿ ಕುತ್ತಿಗೆಗೆ ಹಗ್ಗ ಬಿಗಿದಿದ್ದಾಳೆ. ನಂತರ ತಂದೆ ತನ್ನ ಫೋನ್ನಲ್ಲಿ ಚಿತ್ರಗಳನ್ನು ತೆಗೆದುಕೊಂಡಿದ್ದಾನೆ. ಈ ಮಧ್ಯೆ ಆತ ಸ್ಟೂಲು ತಪ್ಪಿಸಿದ್ದಾನೆ, ಈ ಸಂದರ್ಭದಲ್ಲಿ ಬಾಲಕಿ ಹಗ್ಗದಲ್ಲಿ ಸಿಲುಕಿ ಸಾವನ್ನಪ್ಪಿದ್ದಾಳೆ. ಮತ್ತೊಬ್ಬ ಹನ್ನೆರಡು ವರ್ಷದ ಮಗಳು ಕೂಡ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದಾಳೆ.
ಕೊಲೆಯ ನಂತರ ಆರೋಪಿಗಳು ಮನೆ ಬಿಟ್ಟು ಹೋಗಿದ್ದರು. ನಂತರ ಠಾಣೆಗೆ ಕರೆ ಮಾಡಿ ನಾವು ಕೆಲಸಕ್ಕೆ ಹೋಗಿ ವಾಪಸ್ ಬಂದು ನೋಡಿದಾಗ ಮಗಳು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಷ್ಟರಲ್ಲಿ ತಂದೆಯೇ ಕೊಲೆಗಾರ ಎಂಬುದು ಗೊತ್ತಾಗಿದೆ. ಸಂಬಂಧಿಕರಿಗೆ ತಕ್ಕ ಪಾಠ ಕಲಿಸಲು ಮಗಳನ್ನು ಹತ್ಯೆ ಮಾಡಲಾಗಿದೆ ಎಂಬುದು ಆರೋಪಿಯ ಹೇಳಿಕೆ.
ಅವರ ಮೊದಲ ಪತ್ನಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಅವರ ಎರಡನೇ ಪತ್ನಿಯೂ ಅವರನ್ನು ತೊರೆದಿದ್ದರು. ಆತ ಕೂಲಿ ಕಾರ್ಮಿಕನಾಗಿದ್ದು, ಕಳೆದ ದಿನ ಆತನನ್ನು ಬಂಧಿಸಲಾಗಿತ್ತು. ಕೊಲೆಯ ಹಿಂದಿನ ನಿಜವಾದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.