(www.vknews.in)
ಜೀವನ ನೌಕೆಯಲ್ಲಿ ಒಬ್ಬಂಟಿ ನಾವಿಕ,
ಹೋರಾಡುವನು ಒಬ್ಬ ಆನಾಮಿಕ,
ದಡ ಸೇರುವ ಬರದಲ್ಲಿ, ಮುಳುಗುವನು ಎಡವಟ್ಟಾದ್ದಲ್ಲಿ.
ಈಗಿನ ಕುಟುಂಬ ಜೀವನ, ಒಂದು ನಿಲ್ಲಲಾರದ ಕದನ, ಹತ್ತಾರು ಕಣ್ಣುಗಳು ಆಸೆಯಲ್ಲಿ, ನೋಡುತ್ತಿರುವುದು ತವಕದಲ್ಲಿ.
ದಡ ಸೇರದೆ ಮುಳುಗಿದ್ದಲ್ಲಿ, ಕುಟುಂಬ ನಡು ಬೀದಿಯಲ್ಲಿ, ಹೇಳಿದ್ದಷ್ಟು, ಕೇಳಿದ್ದಷ್ಟು ಸುಲಭವಿಲ್ಲ, ಯೋಚಿಸಿ, ಚಿಂತಿಸಿ ಫಲವಿಲ್ಲ.
ದಣಿವರಿಯದ ಹೋರಾಟದಲ್ಲಿ, ಮರೆತಿರುವನು ಎಲ್ಲವನ್ನೂ ಸೋಲಿನಲ್ಲಿ, ಒಳ್ಳೆಯದು ಇರುವುದೆಂಬ ವಿಶ್ವಾಸದಲ್ಲಿ, ಮುನ್ನುಗ್ಗುವನು ಮತ್ತೊಮ್ಮೆ ರಭಸದಲ್ಲಿ.
ಸಹಾಯದ ಹಸ್ತದ ನಂಬಿಕೆಯಿಲ್ಲ, ಸ್ವಯಂ ಹೋರಾಟದ ಭರವಸೆಯಿಲ್ಲ, ಅ ಸರ್ವಶಕ್ತನ ವಿಶ್ವಾಸದಲ್ಲಿ, ದಿನದೂಡುವನು ಏಕಾಂತದಲ್ಲಿ.
ನಂಬಿದವರು ದೂರ ಇರುವರು, ನೋಡಿದವರು ಮೆಲ್ಲನೆ ಜಾರುವರು, ಕೇಳಿದವರು ಮನದೊಳಗೆ ನಗುವರು, ತಿಳಿದವರು ಕಣ್ಣು ಮುಚ್ಚುವರು.
ಹೇಳಲು ಮಾತ್ರ ಖೈರ್ ಉಮ್ಮತಿ, ಕೇಳಲು ಸೂಚಿಸುವರು ಎಲ್ಲದಕ್ಕೂ ಅಸಮ್ಮತಿ, ಅಹಂಕಾರದಿಂದ ಎನ್ನುವನು ಎಲ್ಲವೂ ನನ್ನಿಂದಲೇ, ಮರೆತಿರುವರು ಬಿಟ್ಟು ಹೋಗಲಿರುವುದು ಒಮ್ಮೆಲೇ.
ಅಶ್ಫಾಕ್ ಎ. ಕಾರ್ನಾಡ್, ಪ್ರವಾಸಿ – ಸೌದಿ ಅರೇಬಿಯಾ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.