(www.vknews.in) ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಪಂಚಾಯ್ತಿಯ ಮಾರಮ್ಮನಹಳ್ಳಿ ಗ್ರಾಮದ ನಿವಾಸಿಗಳಾದ ಶ್ರೀಮತಿ ಓಬಮ್ಮ ಶ್ರೀಯುತ ಗಿಡ್ಡ ಪಾಲಯ್ಯ ಎಂಬ ಬಡ ದಂಪತಿಗಳ ಮಗನಾದ ಪಾಲಯ್ಯ. ಪಿ ರವರು ಬುಡಕಟ್ಟು ಜನಾಂಗದ ದೈವಾರಾಧನೆಯ ಬಗ್ಗೆ ಅಧ್ಯಯನ ಮಾಡಿರುವ ವಿಷಯವಾದ “ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ದೈವ ಸಂಬಂಧ : ಸಾಂಸ್ಕೃತಿಕ ಅಧ್ಯಯನ”(ಮೊಳಕಾಲ್ಮೂರು ಚಳ್ಳಕೆರೆ ತಾಲ್ಲೂಕುಗಳನ್ನು ಅನುಲಕ್ಷಿಸಿ)ಎಂಬ ವಿಷಯದ ಮೇಲೆ ಸಂಶೋಧನೆ ಮಾಡಿರುವ ಶ್ರೀಯುತ ಪಾಲಯ್ಯ ಪಿ ರವರು ಮ್ಯಾಸಬೇಡ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಇವರು ತಮ್ಮ ಬುಡಕಟ್ಟಿನ ದೈವಾರಾಧನೆಗಳ ಬಗ್ಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕರವಾದ ಅಂಶಗಳನ್ನು ತನ್ನ ಸಂಶೋಧನಾ ಪ್ರಬಂಧದಲ್ಲಿ ಕಟ್ಟಿಕೊಟ್ಟಿದ್ದಾರೆ. ಪಾಲಯ್ಯ ಪಿ ರವರು ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ಮಾರ್ಗದರ್ಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ರವರ ಮಾರ್ಗದರ್ಶನದೊಂದಿಗೆ ಪಿಎಚ್. ಡಿ ಮಹಾಪ್ರಬಂಧವನ್ನು ಸಿದ್ಧಪಡಿಸಿ ತನ್ನ ವಿಭಾಗದಲ್ಲಿ ಮಂಡಿಸಿರುವುದರಿಂದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ ರಮೇಶ ಸರ್ ರವರ ಆದೇಶದ ಮೇರೆಗೆ ಕನ್ನಡ ವಿವಿಯ ಕುಲಸಚಿವರಾದ ಡಾ. ಸುಬ್ಬಣ್ಣ ರೈ ರವರು ಶ್ರೀಯುತ ಪಾಲಯ್ಯ ಪಿ ರವರಿಗೆ ಡಿಸೆಂಬರ್ 8 ರಂದು ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ 31ನೇ ಘಟಿಕೋತ್ಸವದಲ್ಲಿ ಪಿಎಚ್.ಡಿ(ಡಾಕ್ಟರೇಟ್) ಪದವಿಯನ್ನು ನೀಡಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.