(www.vknews.in) ದಿನಾಂಕ 19 – 01 – 2023 ರಂದು ರಾತ್ರಿ 8:00 ಗಂಟೆಗೆ ಹಿದಾಯತ್ ನಗರ ಕಲ್ಪಣೆ, ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಅಸೆಯ್ಯದ್ ಅಕ್ರಂ ಅಲಿ ತಂಙಳ್ ರಹ್ಮಾನಿ ಮಜ್ಲಿಸುನ್ನೂರು ನೇತೃತ್ವ ನೀಡಲಿದ್ದಾರೆ. ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರ್ ಪ್ರಭಾಷಣ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಸಹದ್ ವಹಿಸಲಿದ್ದು,ಬೋಳಂತೂರು ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಹದಿ ಉದ್ಘಾಟನೆ ನೆರವೇರಿಸಲಿದ್ದಾರೆ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಕುಡುಂಬಕೋಡಿ, ಕಾರ್ಯದರ್ಶಿ ಅಬ್ಬಾಸ್ ದಂಡೆಮಾರ್, ಮದ್ರಸ ಕಮಿಟಿ ಅಧ್ಯಕ್ಷ ಹನೀಪ್ ಕಲ್ಪಣೆ, ನುಸ್ರತ್ ಕಮಿಟಿ ಅಧ್ಯಕ್ಷ ಅಶ್ರಫ್ ನಾಡಾಜೆ, ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಶಾಫಿ ಮುರ, ಕ್ರಿಯಾ ಸಮಿತಿ ಅಧ್ಯಕ್ಷ ಉಮರಬ್ಬ ಬಿ ಜಿ, ಮುಬಾರಕ್ ಯಂಗ್ ಮೆನ್ಸ್ ಅಧ್ಯಕ್ಷ ಮುಹಮ್ಮದ್ ಹನೀಪ್ ಕೊಕ್ಕಪುಣಿ. ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮದ್ರಸದ ಸದರ್ ಮುಹಲ್ಲಿಂ ಶಿಯಾಬುದ್ದೀನ್ ಅಝ್ಹರಿ ಮುಹಲ್ಲಿಂ ಮುಹಮ್ಮದ್ ಮುಸ್ಲಿಯಾರ್, ಮುಅಝೀನ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮುಂತಾದವರು ಗಣ್ಯ ಉಪಸ್ಥಿತರಿರುವರು. ಎಸ್ ಕೆ ಎಸ್ ಎಸ್ ಎಫ್ ಕಾರ್ಯದರ್ಶಿ ಮುಹಮ್ಮದ್ ನೌಶಾದ್ ಸ್ವಾಗತ ಮಾಡಲಿದ್ದು ಜಾಬಿರ್ ಮುಬಶ್ಶಿರ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.