(www.vknews.in) ಮುಹಿದ್ದೀನ್ ಜುಮಾ ಮಸೀದಿ ಗಾಂಧಿನಗರ ಸುಳ್ಯ ಇದರ ಮಯ್ಯಿತ್ ಪರಿಪಾಲನಾ ಕಟ್ಟಡ ನಿಧಿಗೆ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ ವತಿಯಿಂದ ರೂಪಾಯಿ ಹತ್ತು ಸಾವಿರ ಧನ ಸಹಾಯವನ್ನು ಗಾಂಧಿನಗರ ಮಸೀದಿಯ ಅಲ್-ಇಖ್ವಾನ್ ಮಯ್ಯಿತ್ ಪರಿಪಾಲನಾ ಸಮಿತಿಯ ಪಧಾಧಿಕಾರಿಗಳಿಗೆ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಪ, ಪ್ರಧಾನ ಕಾರ್ಯದರ್ಶಿ ಕೆ.ಬಿ ಮಜೀದ್, ಅಲ್-ಇಖ್ವಾನ್ ಮಯ್ಯಿತ್ ಪರಿಪಾಲನಾ ಉಪ ಸಮಿತಿಯ ಸಂಚಾಲಕ ಹನೀಫ್ ಗಾಂಧಿನಗರ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸಿದ್ದೀಕ್ ಕ್ಕೊಕ್ಕೊ, ನ್ಯಾಯವಾದಿ ಮೂಸಾ ಪೈಬಂಚ್ಚಾಲ್, ಹನೀಫ್ ಸೆಂಟ್ಯಾರ್ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.