ಮಂಗಳೂರು (www.vknews.in) : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಿರ್ಣಾಯಕ ಪಾತ್ರವಹಿಸಿ ಡಾಕ್ಟರ್ ಅಂಬೇಡ್ಕರ್ ರವರ ಮುಖಾಂತರ ದೇಶ ರಚಿಸಿ ಕೊಂಡ ಪವಿತ್ರ ಸಂವಿಧಾನವನ್ನು ರಕ್ಷಿಸಿ ಉಳಿಸಲು ಮುಸ್ಲಿಂ ಲೀಗ್ ನ ಕಾರ್ಯಕರ್ತರು ಪಣತೊಡಬೇಕೆಂದು ಸಿ ಅಬ್ದುಲ್ ರಹಿಮಾನ್ ಕರೆ ನೀಡಿದರು
ದಕ್ಷಿಣ ಕನ್ನಡ ಮುಸ್ಲಿಂ ಲೀಗ್ ನ ನೂತನ ಅಧ್ಯಕ್ಷರಾಗಿ ನಿಯುಕ್ತರಾದ ಅವರು ಅಧಿಕಾರ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಇಂದು ದೇಶವನ್ನು ಆಳುತ್ತಿರುವವರು ನಮ್ಮ ಸಂವಿಧಾನವನ್ನೇ ಬುಡಮೇಲು ಮಾಡುವ ಕೆಲಸದಲ್ಲಿ ನಿರಂತರಾಗಿದ್ದಾರೆಂದರು ದೇಶದ ಭಿನ್ನ ಸಂಸ್ಕೃತಿಯನ್ನು ಭಾಷೆಗಳನ್ನು ಜಾತಿ- ಧರ್ಮಗಳನ್ನು ಸಮಾನವಾಗಿ ಕಂಡು ಪೋಷಿಸಿ ಬೆಳೆಸುವ ನಮ್ಮ ಸಂವಿಧಾನದಿಂದಾಗಿ ದೇಶದ ಐಕ್ಯತೆ, ಅಖಂಡತೆ ಭದ್ರತೆ ಉಳಿದಿದೆ ಎಂದು ಅವರು ಸಂವಿಧಾನ ಅಳಿದರೆ ದೇಶ ಉಳಿಯುವುದಿಲ್ಲ ಎಂದರು.
ಸಭೆಯಲ್ಲಿ ಕಾರ್ಯಕರ್ತರು ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಮಾಡಿದರು. ರಾಜ್ಯ ಮುಸ್ಲಿಂ ಲೀಗ್ ಸದಸ್ಯ ಏ ಎಸ್ಇ ಕರೀಂ ಕಡಬ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಅರೆಕಳ ಹಾಜಿ ಆದಂ ಹುಸೇನ್ ಹಾಜಿ ಅಬ್ದುಲ್ ರಹಮಾನ್ ಮೊಹಮ್ಮದ್ ಬಶೀರ್ ಉಳ್ಳಾಲ ಎಂ ಎಸ್ ಸಿದ್ದೀಕ್ ಪಿಕೆ ಸಯ್ಯದ್ ಬೆಳ್ತಂಗಡಿ ಎಚ್ ಮೊಹಮ್ಮದ್ ಇಸ್ಮಾಯಿಲ್ ರೌಫು ಬಂದರ್ ಶಬೀರ್ ಅಝ್ಹರಿ ಮೊದಲಾದವರು ಮಾತನಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.