(www.vknews.in) ; ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿಬಂಟ್ವಾಳ ತಾಲೂಕು ಇಲ್ಲಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತಮ ಶಾಲಾಭಿವೃದ್ಧಿ ಸಮಿತಿ ಎಂದು ಗುರುತಿಸಿದ ಶಾಲೆಗಳಲ್ಲಿ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕೋಡಪದವು ಒಂದಾಗಿದ್ದು, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ದ. ಕ. ಜಿಲ್ಲೆ ಇವರು 28-02-23 ರಂದು ಹಮ್ಮಿಕೊಂಡಿದ್ದ ಎಸ್ಡಿಎಂಸಿ ಜಿಲ್ಲಾ ಸಮಾವೇಶದಲ್ಲಿ ಉತ್ತಮ ಕ್ರಿಯಾಶೀಲ ಶಾಲಾಭಿವೃದ್ಧಿ ಸಮಿತಿಯನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ದ. ಕ. ಜಿ. ಪಂ. ಸ. ಹಿ. ಪ್ರಾ. ಶಾಲೆ ಕೋಡಪದವು ಇಲ್ಲಿನ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಹಾಲಿ ಮತ್ತು ನಿಕಟಪೂರ್ವ ಎಸ್ಡಿಎಂಸಿ ಯ ಸರ್ವ ಸದಸ್ಯರನ್ನು ಜಿಲ್ಲಾ ಮಟ್ಟದಲ್ಲಿ ಅಭಿನಂದಿಸಲಾಯಿತು.
ನಮ್ಮ ಶಾಲೆಗೆ ಸ್ಥಳೀಯ ವಿಟ್ಲ ಪಡ್ನೂರು ಸೇವಾ ಸಹಕಾರಿ ಸಂಘ ವು ಕೊಡಮಾಡಿದ ರೂ.25,000/- ದ ಚೆಕ್,ಅಭಿನಂದನಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿರುತ್ತಾರೆ… ಚೆಕ್ ಮತ್ತು ಅಭಿನಂದನಾ ಪತ್ರವನ್ನು ಈ ದಿನ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಲೆಗೆ ಹಸ್ತಾ0ತರಿಸಲಾಯಿತು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.