(ವಿಶ್ವ ಕನ್ನಡಿಗ ನ್ಯೂಸ್) : ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ, ಖ್ಯಾತ ಶಿಕ್ಷಣ ತಜ್ಞ, ತನ್ನ ಜೀವನದ ಬಹುಪಾಲು ಸಮಯವನ್ನು ಶಿಕ್ಷಣದ ಕುರಿತಾದ ವಿಚಾರ ವಿನಿಮಯಗಳಿಗೆ ಮೀಸಲಿಟ್ಟಿದ್ದ ಶಿಕ್ಷಣ ಪ್ರೇಮಿ, “ಕಲಿಯಿರಿ ಕಲಿಸಿರಿ ಇಹಪರಗಳಲ್ಲಿ ವಿಜಯಗಳಿಸಿರಿ” ಎಂಬ ದ್ಯೇಯ ವಾಖ್ಯದೊಂದಿಗೆ ಶಿಕ್ಷಣದ ಬಗ್ಗೆ ಜನ ಜಾಗೃತಿ ಮೂಡಿಸಿದ್ದ, ನಾಡು ಕಟ್ಟಿದ ನೇತಾರ ಅನಾಥ ರಕ್ಷಕ, ಮರ್ಹೂಂ ಶೇಕಮಲೆ ಮಮ್ಮುಂಞೆ ಹಾಜಿಯವರ ಮೊಮ್ಮಗ(ಮಗಳ ಮಗ) ಹಾಫಿಲ್ ಅಹ್ಮದ್ ಯಹ್ಯಾ ಅವರು ಖ್ಯಾತ ಮತ ಲೌಕಿಕ ಶಿಕ್ಷಣ ಸಮುಚ್ಚಯವಾದ ಮುಹಿಮ್ಮಾತ್ ನಲ್ಲಿ ವ್ಯಾಸಂಗ ಪೂರ್ತಿಗೊಳಿಸಿ ಇಂದು ಹಿಮಮಿ ಬಿರುದು ಪಡೆಯಲಿದ್ದಾರೆ.
ಪರಿಶುದ್ಧ ಖುರ್ ಆನ್ ಕಂಠಪಾಠ ಪೂರ್ತಿಗೊಳಿಸಿ, ಬಳಿಕ ಉನ್ನತ ಧಾರ್ಮಿಕ ಶಿಕ್ಷಣವನ್ನು ಪಡೆದು, ಈ ಸಾಲಿನ ಹಿಮಮಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದು ತೇರ್ಗಡೆ ಗೊಂಡಿರುವುದು ಅವರ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದೆ…
ಮುಲಾರಪಟ್ನ ಇಬ್ರಾಹಿಂ ರವರ ಮಗನಾಗಿರುವ, ಭವಿಷ್ಯದ ಭರವಸೆಯಾಗಿರುವ ಹಾಫಿಲ್ ಅಹ್ಮದ್ ಯಹ್ಯಾ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯ್ಯಲು ಅಲ್ಲಾಹು ಅನುಗ್ರಹಿಸಲಿ.. ಆಮೀನ್… ಎಂಬ ಶುಭ ಹಾರೈಕೆ…
– ಎಸ್ ಪಿ ಬಶೀರ್ ಶೇಕಮಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.