(www.vknews.in) ; ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ 75ನೇ ಸ್ಥಾಪನಾ ದಿನಾಚರಣೆಯ ಸಂಧರ್ಭದಲ್ಲಿ ನಾವು ನನೆಯಲೇ ಬೇಕಾದ- ಆದರೆ ಈಗ ನಾವು ಮರೆತಿರುವ- ಮುಸ್ಲಿಂ ಲೀಗಿನ ಮಹಾನ್ ನಾಯಕ A.K.M ಹಸನುಸ್ಸಮಾನ್ ಸಾಹೇಬ್.
ಈಶಾನ್ಯ ಭಾರತದಲ್ಲಿ (Northeast) ಮೂಡಿಬಂದ ಕೆಚ್ಚೆದೆಯ ಮುಸ್ಲಿಂ ಯುವ ನಾಯಕ- ಪಶ್ಚಿಮ ಬಂಗಾಳದಲ್ಲಿ ಖಾಯಿದೆ ಮಿಲ್ವತ್ ರವರ ಶಿಷ್ಯನಾಗಿ ಮುಸ್ಲಿಂ ಲೀಗ್ ಪಕ್ಷವನ್ನು ಕಟ್ಟಿ ಬೆಳೆಸಿ ಪ್ರಬಲ ರಾಜಕೀಯ ಶಕ್ತಿಯನ್ನಾಗಿ ಮಾಡಿದ ನಾಯಕ. ಕೊಲ್ಕತ್ತಾ ಹೈಕೋರ್ಟ್ನ ನ್ಯಾಯವಾದಿಯಾಗಿದ್ದ ಹಸನುಸ್ಸಮಾನ್ ಸಾಹೇಬ್ ಬಂಗಾಳ ವಿದಾನಸಭೆಗೆ ಮುಸ್ಲಿಂ ಲೀಗಿನ 7 ಮಂದಿ ಶಾಸಕರನ್ನು ಆರಿಸಿತಂದವರು.
ಬಂಗಾಳದಿಂದ ಒಬ್ಬ ಸಂಸದರನ್ನು ಪಕ್ಷದ ಬೆಂಬಲದಿಂದ ಗೆಲ್ಲಿಸಿದವರು. ಬಂಗಾಳ ಸರಕಾರದಲ್ಲಿ ಭಾಗೀದಾರಿನಾಗಿ ಸಚಿವರಾಗಿ ಕೂಡ ಪಕ್ಷಕ್ಕೆ ಕೀರ್ತಿ ತಂದವರು. ಜೀವಿತಕಾಲದಲ್ಲಿ ಕೇರಳದ ಸಹಿತ ದೇಶದಾತ್ಯಂತ ಮುಂಜೂಣಿಯಲ್ಲಿದ್ದ ಮುಸ್ಲಿಂ ನಾಯಕ. ತನ್ನ 40ನೇ ವಯಸ್ಸಿನಲ್ಲಿ ಬಂಗಾಳ ಸರಕಾರದಲ್ಲಿ ಸಚಿವನಾಗಿ 57ರ ಹರೆದಲ್ಲಿ ನಮ್ಮನ್ನಗಲಿದ ಆ ಮಹಾ ಚೇತನವನ್ನು ನೆನೆದು ಅವರಿಗೆ ಅಲ್ಲಾಹನು ಸ್ವರ್ಗದಲ್ಲಿ ಉನ್ನತ ಸ್ಥಾನವನ್ನು ಕರುಣೆಸಲೆಂದು ಪ್ರಾರ್ಥಿಸೋಣ.
— ಎ.ಎಸ್ಇ ಕರೀಂ, ಕಡಬ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.