(www.vknews.in) ; “ಒಂದು ಕಥೆ ಅಥವಾ ನಾಟಕ ಮನುಷ್ಯನಿಗೆ ಇಷ್ಟವಾದರೆ, ಆ ಇಷ್ಟ ಪ್ರಭಾವವಾದರೆ, ಅದರ ನಾಯಕ, ಪ್ರತಿನಾಯಕ, ಅನುಕಂಪಿತ ಪಾತ್ರ, ಪೋಷಕ ಪಾತ್ರ…..ಮುಂತಾದುವು, ನಾವು ನಾಟಕ ಮಾಡಿ ಹೋಗಿ , ಎಷ್ಟು ವರುಷ ಕಳೆದರೂ, ಜನರ ಮನದಲ್ಲಿ ಮೆದುಳಲ್ಲಿ ಅಚ್ಚಳಿಯದೆ ಹಾಗೇ ಉಳಿದಿರುತ್ತದೆ. ಇದರಲ್ಲಿ ಅತಿರೇಕದ ಒಳ್ಳೆಯದು, ಅತಿರೇಕದ ಕೆಟ್ಟದಾದ ಪಾತ್ರ, ಸನ್ನಿವೇಶಗಳು,..,… ತುಂಬಾ ಗಮನಾರ್ಹ ಪ್ರಭಾವ ತಲೆತಲಾಂತರವಾಗಿ, ಪೀಳಿಗೆಯಿಂದ ಪೀಳಿಗೆಗೆ -ಅತೀವ ಗಂಭೀರ ಪ್ರಭಾವ ಬೀರುತ್ತದೆ” ಎಂದು ನಮ್ಮ ಬೀದಿ ನಾಟಕ ನಿರ್ದೇಶಕ ಹಾಗೂ ನಾಟಕ ಗುರು ಸಾಬ್ ಎಂಬುವವರು ಹೇಳಿದ್ದರು.
ಅವರ ನುಡಿಗಳನ್ನು ಅನುಲೋಮವಾಗಿ ಈ ಕೆಳಗಿನವುಗಳಿಗೆ ಸಮಾಂತರವಾಗಿ ವಿವರಿಸಬಹುದು…. ಪುಸ್ತಕವಾದ/ಪುಸ್ತಕವಾಗದ ಬರಹಗಳು , ನಾಟಕ ಧಾರಾವಾಹಿ, ಸಿನೆಮಾ, ಯಕ್ಷಗಾನ, ಅಂಗೈಯಲ್ಲಿರುವ ಸಾಮಾಜಿಕ ಜಾಲತಾಣದ ಬರಹಗಳು, ಛಾಯಾಚಿತ್ರ, ತುಣುಕು ದೃಶ್ಯಾವಳಿಗಳು…… ಗಳನ್ನೂ ಸೇರಿಸಬಹುದು. ಯಾಕೆಂದರೆ ಅವೂ ಕೂಡಾ ಪ್ರಭಾವ ಬೀರುತ್ತದೆ.
ಈ ಪ್ರಭಾವಕ್ಕೆ ಕಾರಣೀಕೃತ ಮಾಧ್ಯಮ ಅಂದರೆ–ಮಾನಸಿಕ ಪ್ರಭಾವ. ಅದು ಪ್ರೀತಿ ಆಗಿರಬಹುದು ದ್ವೇಷವೂ ಆಗಿರಬಹುದು.
ನಮ್ಮ ಪುರಾಣ ಕಥೆಗಳಲ್ಲೂ, ಇಂದೂ ಕೂಡಾ,– ಮಡಿದ ಸೈನಿಕ ಯಾರೇ ಆಗಲಿ, ಶತ್ರುರಾಷ್ಟದವನೇ ಆಗಲಿ, ಆ ಮರಣವನ್ನು ವೀರ ಮೃತ್ಯು ಎನ್ನುತ್ತೇವೆ.
ಕೆಲ ದಿನಗಳ ಹಿಂದೆ ಟಿಪ್ಪುವಿನ ವೀರ ಮೃತ್ಯು ಬಗ್ಗೆ ಇಬ್ಬರು ಉರಿ+ನಂಜೇ ಗೌಡ ಎಂಬವರ ಹೆಸರು ಈ ಅಂಗೈ ಸಾಮಾಜಿಕ ಜಾಲತಾಣದ ಮುಖಾಂತರ ಪಸರಿಸಲಾಯಿತು. ಅಲ್ಲದೆ ಅದು ಆಳವಾಗಿ ಪ್ರಭಾವವಾಗಲು ಚಲನಚಿತ್ರವನ್ನೇ ಮಾಡಲು ತಕ್ಷಣ ಮುಂದಾದರು. ಜನರ ಸಮಸ್ಯೆಗಳನ್ನು ಗರಿಷ್ಟ ದಿಂದ ಕನಿಷ್ಟ ಮಾಡಲು ಮಂತ್ರಿಯಾದವರು, ಜನರನ್ನು ಸಮಸ್ಯೆಗಳೊಳಗೆ ಖೈದಿಯಾಗಿಸುವ ಜನ ಸೇವಕರ ಈ ಉತ್ತೇಜನ– ಯಪ್ಪಾ ಹೇಳತೀರದು. ಇಂತಹಾ ಕೆಲಸಗಳಲ್ಲಿ , ಏನು ವೇಗ!!!!ಏನು ವೇಗೋತ್ಕರ್ಷ!!!! ಈ ಜನರ ಓಟಿನ ಭಿಕ್ಷೆಯಿಂದ ಹುಟ್ಟಿದವರಿಗೆ!!!!!
ಆದರೆ, ಒಕ್ಕಲಿಗ ಸಮುದಾಯದ ಸ್ವಾಮಿಜಿಗಳು “ಕಲ್ಪನೆಗಳನ್ನು ಇತಿಹಾಸ ಎಂದು ಹೇಳಲಾಗುವುದಿಲ್ಲ” ಎಂದು ಅಮಾನವೀಯ ಮೂರ್ಖ ಮಂತ್ರಿಗಳಿಗೆ ತಾಕೀತು ಕೊಟ್ಟಿದ್ದು ವಿವರಣಾತೀತ ಸ್ವಾಗತಾರ್ಹ. ಅವರ ಸಾಮಾಜಿಕ ಕಳಕಳಿಗೆ ನಾನು- ನಾವೂ ಮನದಾಳದ ನಮನಗಳನ್ನು ಅರ್ಪಿಸೋಣ.
ಇಂದು, ಹಲವು ವರುಷಗಳಿಂದ, ಗಾಂಧಿ,ನೆಹರು, ಅಂಬೇಡ್ಕರ್…. ಮುಂತಾದ ಭಾರತದ ಘನತೆಯ ಪ್ರತೀಕವಾದವರ ಬಗ್ಗೆ ಸುಳ್ಳು ಕಥೆ, ನಿರೂಪಣೆ, ದೃಶ್ಯ ತುಣುಕು, ಸಿನೆಮಾ….ಮಾಡಿ, ಜನರ / ಮುಂಬರುವ ಪೀಳಿಗೆಯ ಮನ ಮೆದುಳುಗಳಲ್ಲಿ , ಅಂತಹಾ ಧೀಮಂತ ವ್ಯಕ್ತಿಗಳ ಮಾನವೀಯ-ಸಾಮಾಜಿಕ ಮೌಲ್ಯಗಳನ್ನು ಮುಚ್ಚಿ ಮರೆಮಾಚಿಸುತ್ತಿರುವುದು ಘೋರ ಅಪಾಯಕ್ಕೆ ಮುನ್ನುಡಿಯಂತಿದೆ. ಅಂತಾರಾಷ್ಟ್ರಗಳಲ್ಲೂ ಈ ಧೀಮಂತ ವ್ಯಕ್ತಿಗಳನ್ನು ಪರಕೀಯರೂ ಗೌರವಿಸುತ್ತಾರೆ, ಕಲಿಯುತ್ತಾರೆ, ಸಂಶೋಧಿಸುತ್ತಾರೆ, ಅಭಿಮಾನಿಗಳಾಗಿ ಅವರ ಆದರ್ಶಗಳನ್ನು ಪೋಷಿಸುತ್ತಾರೆ. ಅದು ಭಾರತೀಯರಾದ ನಮಗೆ ಹೆಮ್ಮೆ ಅಲ್ಲವೆ?
ಡಾ ರಾಜ್ ರವರ ಕವಿರತ್ನ ಕಾಳಿದಾಸ ಚಲನಚಿತ್ರದ —”ತಾನು ಕೂತ ಟೊಂಗೆಯನ್ನು ಕಡಿದರೆ, ತಾನೇ ಕೆಳಗೆ ಬೀಳಬಹುದಲ್ಲವೇ?”- ಎಂಬ ಬಾಲಕೃಷ್ಣರವರ ಪ್ರಶ್ನೆಯಂತೆ. ನಮ್ಮ ದೇಶದ ಧೀಮಂತ ವ್ಯಕ್ತಿಗಳ ಬಗ್ಗೆ ನಮ್ಮ ದೇಶದವರೇ ಸುಳ್ಳು ಹಬ್ಬಿಸಿದರೆ….
ಒಂದು ಸಮುದಾಯದ ಸ್ವಾಮಿಯವರು, ಸುಳ್ಳು ಕಥೆಯಿಂದ ಸಮಾಜದ ಸ್ವಾಸ್ಥ್ಯ ಕೆಡಹಬಹುದೆಂದು ಮನಗಂಡಂತೆ, ಒಂದು ದೇಶದ ಸರ್ವೋಚ್ಚ ನ್ಯಾಯಾಲಯದ ಉತ್ತುಂಗ ಪದವಿಯಲ್ಲಿರುವವರು , ದೇಶದ ಧೀಮಂತ ವ್ಯಕ್ತಿಗಳ ಬಗ್ಗೆ ಅಪಪ್ರಚಾರ ಮಾಡಿ, ಸಮಾಜದ ಸಹಜತೆ ಕೆಡುವುದಲ್ಲದೆ, ಅನ್ಯ ರಾಷ್ಟ್ರಗಳ ಮುಂದೆ ತಲೆತಗ್ಗಿಸುವ ಗತಿ ಬರಬಾರದೆಂದು ಸೂಕ್ತ ಕ್ರಮ ಯಾಕೆ ತೆಗೆದುಕೊಳ್ಳಬಾರದು? ಸಮುದಾಯದ ಸ್ವಾಮೀಜಿಗೆ, ಸಮಾಜದ ಕಾಳಜಿ ಇರುವಷ್ಟು ಬದ್ದತೆ, ನಮ್ಮ ನ್ಯಾಯಾಲಯಗಳ ಉತ್ತುಂಗದಲ್ಲಿ ಕುಳಿತವರಿಗಿದ್ದರೆ….
ಸರ್ವಜನಾಂಗದ ಶಾಂತಿಯತೋಟ…. …..ಕಂಗಳ ಸೆಳೆಯುವ ನೋಟ.
✍️ ನಿಮ್ಮವ ನಲ್ಲ ರೂಪೇಶ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.