ಹನೂರು (www.vknews.in) : ತಾಲೂಕಿನಲ್ಲಿ ಪ್ರಸಿದ್ಧ ಕ್ಷೇತ್ರ ಶ್ರೀ ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ಸೇರಿರುವ ಬಸ್ ಗಳಲ್ಲಿ ಯೋಗ್ಯವಲ್ಲದ ಚಕ್ರ ಅಳವಡಿಸಿ ಚಾಲನೆ ಮಾಡುತ್ತಿರುವ ಕುರಿತು ಮುಜುರಾಯಿ ಇಲಾಖೆ ವಿರುದ್ಧ ಸರ್ವೋದಯ ಕರ್ನಾಟಕ ಪಕ್ಷದ ರೈತ ಮುಖಂಡರುಗಳು ಎರಡು ದಿನದ ಹಿಂದೆ ಅಕ್ರೋಶ ವ್ಯಕ್ತಪಡಿಸಿ ವಿರೋಧ ವ್ಯಕ್ತ ಪಡಿಸಿದ್ದರು.
ಸೂಕ್ತವಲ್ಲದ ಹಾಗೂ ಯೋಗ್ಯಕ್ಕೆ ಬಾರದ ಟೈರನ್ನು ಚಾಲನೆ ಮಾಡುತ್ತಿರುವ ಕುರಿತು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ವರದಿಯಾದ ಬೆನ್ನಲ್ಲೇ ಇಂದು ನೂತನ ಟೈರ್ ಅಳವಡಿಸಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರ ಮಾಡಲು ಶ್ರೀ ಮಲೈ ಮಹದೇಶ್ವರ ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ.
ಇನ್ನು ಸರ್ವೋದಯ ಕರ್ನಾಟಕ ಪಕ್ಷದ ರೈತ ಮುಖಂಡರು ಮಾದೇವ ಅವರು ಈ ವಿಚಾರವಾಗಿ ಸಾರ್ವಜನಿಕರ ಹಿತ ದೃಷ್ಠಿಯಿಂದ ಸೂಕ್ತ ಹಾಗೂ ಉತ್ತಮವಾದ ಟೈರ್ ಅಳವಡಿಸಿರುವ ಫೋಟೋವನ್ನು ನಮ್ಮ ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.