ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ):ತಾಲೂಕಿನ ಹೆನ್ನಾಬೈಲ್ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಪ್ರಾಯೋಜಕತ್ವದಲ್ಲಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಳೆ ಕಾಲದ ಹತ್ತಾರು ಬಗೆಯ ಆಷಾಡ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಉಪನ್ಯಾಸಕ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಮಾತನಾಡಿ ಹಳೆ ಕಾಲದ ಸಂಸ್ಕೃತಿ ಆಚಾರ ವಿಚಾರ ನಡೆ ನುಡಿ ಜತೆಗೆ ಅಂದಿನ ಕಾಲದ ಆಹಾರ ಪದ್ಧತಿ ಆರೋಗ್ಯ ದ್ರಷ್ಟಿ ,ಜೀವನ ಶೈಲಿಯಲ್ಲಿ ನಂಟು ಹೊಂದಿದೆ,ಧೀರ್ಘ ಆಯುಷ್ಯಕ್ಕೂ ಅಂದಿನ ಕಾಲದ ಆಹಾರ ಪದ್ಧತಿ ದೊಡ್ಡ ನಂಬಿಕೆ ಇದೆ ಆದುನಿಕ ಬದುಕಿಗೆ ಹೊಂದಿಕೊಂಡು ಅವೆಲ್ಲವೂ ಮರೆಯಾಗಿದೆ. ಆರೋಗ್ಯ ದ್ರಷ್ಟಿಯಲ್ಲಿ ಇಂಥಹ ತಿಂಡಿ ತಿನಿಸುಗಳನ್ನು ಯುವ ಪೀಳಿಗೆ ಜತೆಗೆ ಸಮುದಾಯಕ್ಕೂ ಪರಿಚಯಿಸುವ ಅಗತ್ಯವಿದೆ ಎಂದರು.
ಸಾಹಿತಿ ಮುಸ್ತಾಕ್ ಹೆನ್ನಾಬೈಲ್ ಮಾತನಾಡಿ ಹಳೆ ಕಾಲದ ಆಹಾರ ಪದಾರ್ಥ ಮರೆಯಾಗುವುದರ ಜತೆಗೆ ಬದುಕು ಬದಲಾಗಿದೆ ಹಿರಿಯ ಚೇತನರ ದೀರ್ಘ ಆಯುಷ್ಯಕ್ಕೂ ಹಳೆ ಕಾಲದ ತಿಂಡಿ ತಿನಿಸುಗಳು ಎಂಬ ನಂಬಿಕೆ ಇದೆ ಇತ್ತೀಚಿನ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಆಹಾರ, ಆರೋಗ್ಯವಾಗಿದೆ,ಆಹಾರ ಪದ್ಧತಿಯಲ್ಲಿ ಸಮಾಜ ಕೊಂಚ ಬದಲಾವಣೆ ಬಯಸಿದಲ್ಲಿ ಆರೋಗ್ಯ ದ್ರಷ್ಟಿಯಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದರು.ವಿಶೇಷವಾಗಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಳೆ ಕಾಲದ 20 ಬಗೆಯ ಆಹಾರ ಪದಾರ್ಥ ಖಾದ್ಯವನ್ನು ಪ್ರದರ್ಶನ ಮಾಡುವ ಮೂಲಕ ಹಿರಿಯ ಅತಿಥಿಗಳಿಂದ ಕಿರಿಯ ಶಾಲಾ ವಿದ್ಯಾರ್ಥಿಗಳಿಗೆ ತಿನ್ನಿಸುವ ಜೊತೆಗೆ ಪರಿಚಯಿಸಿ ಸರಳ ಭೋಜನ ವ್ಯವಸ್ಥೆ ನಡೆಯಿತು. ಶಾಲಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಸಾಹಿತಿ ಮುಸ್ತಾಕ್ ಹೆನ್ನಾಬೈಲ್, ಮುಖ್ಯ ಶಿಕ್ಷಕ ಪದ್ಮನಾಭ ಶೇಟ್, ಕಾರ್ಯಕ್ರಮ ರೂವಾರಿ ರಾಜೇಂದ್ರ ಬೆಚ್ಚಳ್ಳಿ, ಅಂಗನವಾಡಿ ಶಿಕ್ಷಕಿ ದಿವ್ಯ,ಸಹ ಶಿಕ್ಷಕಿ ಅಮೃತ, ಗೌರವ ಶಿಕ್ಷಕಿ ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.