ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಒಮಾನ್ ರಾಷ್ಟ್ರೀಯ ಮಟ್ಟದಲ್ಲಿ “ವ್ಯವಿಧ್ಯತೆ ಭಾರತದ ವ್ಯೆಶಿಷ್ಯತೆ (Diversity is India ‘s Specialty)” ಎಂಬ ವಿಷಯದಡಿಯಲ್ಲಿ ಕನ್ನಡಿಗರಿಗಾಗಿ ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿದೆ.
ಒಮಾನಿನಲ್ಲಿರುವ ಕನ್ನಡಿಗರಿಗೆ ಮಾತ್ರ ಅವಕಾಶವಿದ್ದು, ಸ್ಪರ್ಧಾರ್ಥಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ, ಸ್ಪರ್ಧಿಸುವವರು ಹೆಸರು, ಊರಿನ ಮತ್ತು ಒಮಾನಿನ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.
ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕೈ ಬರಹದ ಮೂಲಕ ಪ್ರಭಂಧಕ್ಕೆ ಅವಕಾಶವಿದ್ದು, ಕನಿಷ್ಠ 500 ಹಾಗೂ ಗರಿಷ್ಠ 700 ಪದಗಳಿಗೆ ಮೀರಬಾರದು. ಪ್ರಬಂಧ ಬರೆದ ಪ್ರತಿಯನ್ನು ದಿನಾಂಕ 14/08/2023 ರ ಮುಂಚಿತವಾಗಿ [email protected] ಎಂಬ email ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಪ್ರಬಂಧದ ಪಲಿತಾಂಶವನ್ನು ಅಗಷ್ಟ್ 15 ರ KCF ಅಂತರಾಷ್ಟ್ರೀಯ ಸಮಿತಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು.
ವಿಜೇತರಿಗೆ KCF ಒಮಾನ್ ರಾಷ್ಟ್ರೀಯ ಸಮಿತಿಯ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.