ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ದಿನಾಂಕ 21.07.2023ರಂದು ಶಾರ್ಜಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ 42ವರ್ಷ ವಯಸ್ಸಿನ ರೋಷನ್ ಪಿಂಟೋ ಕನ್ನಡಿಗ ಅವರ ಮೃತ ದೇಹವನ್ನು ದಿನಾಂಕ 05.08.2023ರಂದು ಕನ್ನಡ ಸಂಘದ ಮುಖಾಂತರ ತಾಯಿನಾಡು ಮಂಗಳೂರಿಗೆ ತಲುಪಿಸಿದರು.
ಹೆಮ್ಮೆಯ ದುಬೈ ಕನ್ನಡ ಸಂಘದ ಕಾರ್ಯದರ್ಶಿ ರಫೀಕಲಿ ಕೊಡಗು, ಉಪ ಸಮಿತಿ ಸದಸ್ಯರುಗಳಾದ ಅರುಣ್ ಅಲ್ಮೇಡಾ ಹಾಸನ ಮತ್ತು ಪ್ರತಾಪ್ ಮಡಿಕೇರಿ ಅವರು ಜೊತೆ ಸೇರಿ ಊರಿಗೆ ಕಳುಹಿಸಲಾಗಿದೆ.
ಮೃತ ದೇಹ ತಲುಪಿಸಲು ಬೇಕಾದ 6500 ದಿರಾಮ್ ( ರೂ 145,000/- ) ಆರ್ಥಿಕ ಸಹಾಯವನ್ನು ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ಭರಿಸಿದ್ದರು. ಶಾರ್ಜಾ ಭಾಗದ ರಸ್ತೆ ಬದಿಯಲ್ಲಿ ಇದ್ದ ರೋಷನ್ ಪಿಂಟೋ ಅವರನ್ನು ಕಳೆದ ಒಂದು ತಿಂಗಳ ಹಿಂದೆ ಹೆಮ್ಮೆಯ ಕನ್ನಡ ತಂಡ ವಾಸ ಸ್ಥಳಕ್ಕೆ ವರ್ಗಾವಣೆ ಮಾಡಿ ಊಟದ ವ್ಯವಸ್ಥೆ ಮಾಡಿಕೊಟ್ಟರು ಸಹ ಅದೇ ಪಲಾಯನ ರೀತಿಯನ್ನೇ ಮುಂದುವರೆಸಿ ತನ್ನ ದೇಹದ ಬಗ್ಗೆ ಕಾಳಜಿ ವಹಿಸದೆ ಇದ್ದರು ಎಂದು ತಿಳಿದುಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.