ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಯುವ ಸಮೂಹ ಸೇರಿದಂತೆ ಸಮಾಜದಲ್ಲಿ ಅನಾಚಾರ ಮತ್ತು ಮಾದಕ ವಸ್ತುಗಳ ಸೇವನೆಯಂತಹ ಸಾಮೂಹಿಕ ಸನ್ನಿಗಳು ದೈನಂದಿನ ಹೊಸ ರೂಪ ಪಡೆಯುತ್ತಿದ್ದು ಸಜ್ಜನರ ಸಹವಾಸ ದಿಂದ ಮಾತ್ರ ಇದಕ್ಕೆ ಪರಿಹಾರ ದೊರೆಯಲು ಸಾಧ್ಯ ಹಾಗೂ ಉತ್ತಮ ಸಮಾಜದ ಅಡಿಪಾಯಕ್ಕೆ SSFನ ಬೆಳವಣಿಗೆ ಅಗತ್ಯ ಎಂದು ಕರ್ನಾಟಕ ರಾಜ್ಯ Ssf ಇದರ ಅಧ್ಯಕ್ಷ ಮೌಲಾನ ಸುಫ್ಯಾನ್ ಸಖಾಫಿ ಅಭಿಪ್ರಾಯ ಪಟ್ಟರು.
SSF ಗೋಲ್ಡನ್ 50 ಪ್ರಚಾರಾರ್ಥ ಕೆಸಿಎಫ್ ವತಿಯಿಂದ G meet ಪ್ರಚಾರ ಸಭೆಯನ್ನು ಆಯೋಜಿಸಿಲಾಗಿದ್ದು, ಅಬುಧಾಬಿ ನಗರದ ICF ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೆಪ್ಟಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶವು ಇತಿಹಾಸ ಪುಟಗಳು ಸೇರಲಿದ್ದು ಭವಿಷ್ಯದ ಕರ್ನಾಟಕದ ದಿಕ್ಸೂಚಿ ಯಾಗಲಿದೆ ಎಂದು ವಿವರಿಸಿದರು. ಸಮಾರಂಭದಲ್ಲಿ ಕೆಸಿಎಫ್ ಅಂತಾರಾಶ್ಟ್ರೀಯ ಸಮಿತಿಯ ಹಮೀದ್ ಈಶ್ವರಮಂಗಿಳ, ಹಮೀದ್ ಸಅದಿ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಇಬ್ರಾಹೀಂ ಸಖಾಫಿ, ಅಹಮದ್ ಸಖಾಫಿ, ಹಕೀಮ್ ತುರ್ಕಲಿಕೆ, ಕೆಸಿಎಫ್ ಅಬುದಾಬಿ ಸಮಿತಿಯ ಹಸೈನಾರ್ ಅಮಾನಿ ಮತ್ತಿತರ ಗಣ್ಯರು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭ, ಕರ್ನಾಟಕದ ಸಂಸ್ಕ್ರತಿಯನ್ನು ವಿವಿಧ ದೇಶಗಳಿಗೆ ಪರಿಚಯಿಸುವ ಸಲುವಾಗಿ ಕಾರು ಮೂಲಕ ವಿಶ್ವ ಪರ್ಯಟನೆ ಮಾಡುತ್ತಿರುವ ಈಶ್ವರ ಮಂಗಿಳ ಮೂಲದ ಸಿನಾನ್ ರವರನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ನಡೆದ SSF ನ ಬೆಳವಣಿಗೆಯ ಕುರಿತ ಚರ್ಚಾ ಘೋಷ್ಟಿಯಲ್ಲಿ ಸುಫ್ಯಾನ್ ಸಖಾಫಿ, ಇಬ್ರಾಹೀಂ ಸಖಾಫಿ ಮತ್ತು ಹಮೀದ್ ಸಅದಿ ಭಾಗವಹಿಸದ್ದರು. ಕಬೀರ್ ಬಾಯಂಬಾಡಿ ಕಾರ್ಯಕ್ರಮ ನಿರ್ವಹಿಸಿದರು.
ಕೆಸಿಎಫ್ ಅಬುಧಾಬಿ ಸಮಿತಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಬೀರ್ ಬಾಯಂಬಾಡಿ ಸ್ವಾಗತಿಸಿ. ಉಮರ್ ಈಶ್ವರಮಂಗಿಲ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.