ಪ್ರಜಾಪ್ರಭುತ್ವ ಭಾರತದಲ್ಲಿ ಧಾರ್ಮಿಕ ದ್ವೇಷವಿಲ್ಲದೆ ಐಕ್ಯತೆಯಿಂದ ಬದುಕಬೇಕು. ಭಾರತ ಎಲ್ಲರಿಗೂ ಸೇರಿದ್ದು, ಯಾವುದೇ ಧರ್ಮಕ್ಕೆ ಸೀಮಿತವಲ್ಲ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಮ್ಮ ನಾಡು ಭಾರತ.., ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದಾಗಿದೆ. ನಮ್ಮಯ ನಾಡು ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು, ಸೂಫಿ- ಸಂತರ ತಪಸ್ಸು ಮತ್ತು ಮೌಲ್ಯಗಳಿಂದ ರೂಪುಗೊಂಡಿದೆ. ಎಲ್ಲರಿಗೂ ಈ ಹೂದೋಟದಲ್ಲಿ ಜೀವಿಸಲು ಹಕ್ಕಿದೆ. ಈ ದೇಶದ ಸೌರ್ವಭೌಮತೆಯನ್ನು ಮತ್ತು ಐಕ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇಂದು ಅವರು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ SSF ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಳೆಬಂದರೂ ಸಹ, ಏನೇ ಆದರೂ ಜಗ್ಗದ ಇಸ್ಟು ಶಿಸ್ತು ಬದ್ದ ಸಂಘಟನೆ ಬೇರೆಲ್ಲೂ ನೋಡಿಲ್ಲ.., ಈ ಸಂಘಘಟನೆ ಈ ದೇಶಕ್ಕೆ ಅಗತ್ಯ ಎಂದರು. ಕರ್ನಾಟಕ ಏಳು ಕೋಟಿ ಕನ್ನಡಿಗರ ರಕ್ಷಣೆಗೆ ನಾನು ಭರವಸೆ ನೀಡುತ್ತೇನೆ.. ಇಲ್ಲಿ ಯಾರು ಹೆದರಬೇಕಾಗಿಲ್ಲ ಎಂದರು.
ಸಮ್ಮೇಳನ ನಗರಿಯಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ರವರು.., ಪ್ರಜಾಪ್ರಭುತ್ವ ಭಾರತದಲ್ಲಿ ಧಾರ್ಮಿಕ ದ್ವೇಶವಿಲ್ಲದೆ ಐಕ್ಯತೆಯಿಂದ ಬದುಕಬೇಕು. ಭಾರತ ಎಲ್ಲರಿಗೂ ಸೇರಿದ್ದು, ಯಾವುದೇ ಧರ್ಮಕ್ಕೆ ಸೀಮಿತವಲ್ಲ ಎಂದರು. ಇಸ್ಲಾಮಿನ ಉದಾತ್ತ ಸಂದೇಶವಾದ ಮನುಷ್ಯ ಮನುಷ್ಯರಲ್ಲಿ ಪ್ರೀತಿ – ಸ್ನೇಹ ಸೌಹಾರ್ಧತೆಯನ್ನು ಸಾರುವ ಆಶಯವನ್ನಾಗಿದೆ ಇಲ್ಲಿ.. ದೇಶದಲ್ಲಿ SSF ಹರಡುತ್ತಿರುವುದು ಎಂದರು. ಅವರು ಎರಡು ದಿನಗಳಿಗೆ ಕರ್ನಾಟಕ ಸರ್ಕಾರದ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಶಿಸ್ತಿನ ಸಿಪಾಯಿಗಳ ದಂಡನ್ನು ಕಂಡು ಅಚ್ಚರಿಗೊಂಡ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು “ನನ್ನ 45 ವರ್ಷದ ರಾಜಕೀಯ ಇತಿಹಾಸದಲ್ಲಿ ಇಸ್ಟೊಂದು ಸಿಸ್ತು ಬದ್ದ ಸಂಘಟನೆಯನ್ನು ಕಂಡಿಲ್ಲ.. ಎಂದು ಹೇಳಿ ಮಾತು ಪ್ರಾರಂಬಿಸಿದ ಅವರು ಭಾರತ ನಿರ್ಮಾಣಕ್ಕೆ ನಮ್ಮ ಪೂರ್ವಜರು ಯಾವರೀತಿ ಪಣತೊಟ್ಟು ಹೋರಾಟ ನಡೆಸಿದರೋ ಅದೇ ರೀತಿ ಇಂದು SSF ಭಾರತವನ್ನು ಹೊಸ ಶಾಂತಿಯ ಹೂದೋಟವಾಗಲು ಹೋರಾಟ ನಡೆಸುತ್ತಿದೆ. ಈ ಸಂಘಟನೆಗೆ ನನ್ನ ಹಾಗೂ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಬೆಂಬಲವಿದೆ ಎಂದರು.
ನಾನು ಇಲ್ಲಿಗೆ ಒಬ್ಬ ರಾಜಕೀಯ ನಾಯಕನಾಗಿಯೋ, ಉಪಮುಖ್ಯಮಂತ್ರಿಯಾಗಿಯೋ ಬಂದಿಲ್ಲ.. ನಾನು ಒಬ್ಬ ವಿಧ್ಯಾರ್ಥಿ ನಾಯಕ ನಾನು ನಿಮ್ಮನ್ನು ನೋಡಲು ಬಂದಿದ್ದೇನೆ. ನಿಮ್ಮನ್ನು ನೋಡಿ, ನಿಮ್ಮ ಶಿಸ್ತನ್ನು ನೋಡಿ ನಾನು ಅಚ್ಚರಿಗೊಂಡೆ ಎಂದರು.
ವಿಧಾನ ಸಭಾ ಅಧ್ಯಕ್ಷರಾದ ಯುಟಿ ಖಾದರ್, ಕೇರಳ ಸಂಸದ ಟಿ ಎನ್ ಪ್ರತಾಪನ್, ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್ ಬಖಾರಿ, ಡಾ. ಅಬ್ದುಲ್ ಹಕೀಂ ಅಝ್ಹರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಾ. ಫಾರೂಕ್ ನಈಮಿ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಸಂಯುಕ್ಕ ಖಾಝಿ ಸೈಯಿದ್ ಫಝಲ್ ಕೋಯಮ್ಮು ತಂಗಳ್ ಕೂರತ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಸಿಎಂ ಇಬ್ರಾಹೀಂ ಹಾಗೂ ಕೇರಳ ಕರ್ನಾಟಕದ ಮತ್ತು ದೇಶದ ವಿವಿಧ ಕಡೆಗಳಿಂದ ಬಂದ ರಾಜಕೀಯ ಪ್ರಮುಕರು ಧಾರ್ಮಿಕ ವಿಧ್ವಾಂಸರುಗಳು ಮುಂತಾದವರುಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.