ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ಬೌಷರ್ ಝೋನ್ ಇದರ ವತಿಯಿಂದ ದಿನಾಂಕ 16.2.2024 ಶುಕ್ರವಾರ ಜುಮಾ ನಮಾಜ್ ಬಳಿಕ ಝೋನ್ ಅಧ್ಯಕ್ಷರಾದ ಸಲೀಂ ಮಿಸ್ಬಾಹಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕರಾಚಿ ದರ್ಬಾರ್ ಅಲ್ ಖುವೈರ್ ನಲ್ಲಿ ಕೆಸಿಎಫ್ ಡೇ ಕಾರ್ಯಕ್ರಮ ನಡೆಯಿತು.
ಉಸ್ಮಾನ್ ಝುಹ್ರಿ ದುಅ ನೆರವೇರಿಸಿದರು. ಝುಬೈರ್ ಸಅಧಿ ಉದ್ಘಾಟಿಸಿದರು. ಬೌಷರ್ ಝೋನ್ ಅಧ್ಯಕ್ಷರಾದ ಸಲೀಂ ಮಿಸ್ಬಾಹಿ ಉಸ್ತಾದರು ಅಧ್ಯಕ್ಷೀಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಆದರ್ಶ ಭಾಷಣವನ್ನು ಇಹ್ಸಾನ್ ಕರ್ನಾಟಕ RO ಆದ ಬಹು: ಖಲಂದರ್ ಬಾವ ಉಸ್ತಾದ್ ಮಾಡಿದರು. ಮುಹಮ್ಮದ್ ಹನ್ನಾನ್ ಮನ್ನಾಪು ಕಿರಾ-ಅತ್ ಪಠಿಸಿದರು.
ಹಾಗು ಡಿಸೇನಿಯಂ ವಿಷಯ ಮತ್ತು ಸಂಘಟನಾ ತರಗತಿಯನ್ನು ಅಂತಾರಾಷ್ಟ್ರೀಯ ಸಮಿತಿ ಇಹ್ಸಾನ್ ಕಾರ್ಯದರ್ಶಿಯಾದ ಹಂಝ ಹಾಜಿ ಕಣ್ಣಂಗಾರ್ ನಿರ್ವಹಿಸಿದರು.
ಸಭಿಕರ ಅನಿಸಿಕೆ ಕಾರ್ಯಕ್ರಮದಲ್ಲಿ ಝೋನ್ ಕಾರ್ಯಕರ್ತರಾದ ಹನೀಫ್ ಮನ್ನಾಪು, ಜಮಾಲ್ ಸುಳ್ಯ, ಉಸ್ಮಾನ್ ಝುಹ್ರಿ ಇತರ ವಿಷಯಗಳಲ್ಲಿ ಮಾತುಗಳನ್ನು ಆಡಿದರು, ಮುಹಮ್ಮದ್ ರಹಮಾನ್ (ಇಬ್ನ್ ಗಫಾರ್ ಹಾಜಿ)ಮದ್’ಹ್ ಗಾನವನ್ನು ಹಾಡಿದರು.
ಜಮಾಲ್ ಸುಳ್ಯ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು ಬೌಷರ್ ಝೋನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೊಳಕೇರಿ ಸ್ವಾಗತಿಸಿ, ಕೋಶಾಧಿಕಾರಿಯಾದ ಗಫ್ಫಾರ್ ಹಾಜಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.