ನಿಝ್ವ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ನಿಝ್ವ ಝೋನ್ ಇದರ ವತಿಯಿಂದ 15.2.2024 ರಂದು ನಿಝ್ವ ಝೋನ್ ಅಧ್ಯಕ್ಷ ರಾದ ಮುಹಮ್ಮದ್ ಹುಸೈನ್ ತೀರ್ಥಹಳ್ಳಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ನಿಝ್ವ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ನಝೀರ್ ಮದನಿ ಉದ್ಘಾಟನೆಯನ್ನು ನೆರವೇರಿಸಿದರು. ಕಲಂದರ್ ಬಾವ ಪರಪ್ಪು ಇವರು ಆದರ್ಶ ಮತ್ತು ಕೆಸಿಎಫ್ ಡಿಸೇನಿಯಂ ಎಂಬ ವಿಷಯದ ಬಗ್ಗೆ ಮುಖ್ಯ ಪ್ರಭಾಷಣ ಗೈದರು.
ಮುಖ್ಯ ಅತಿಥಿ ಗಳಾಗಿ ಕೆಸಿಎಫ್ ಒಮಾನ್ ಸಾಂತ್ವನ ವಿಭಾಗದ ಅಧ್ಯಕ್ಷ ಖಲಂದರ್ ಭಾಷ ತೀರ್ಥ ಹಳ್ಳಿ, ಝೋನ್ ನಾಯಕರಾದ ಸಿರಾಜ್ ಅರಿಮಳ, ಸಾದಿಕ್ ಕೈಂಬ, ಬಶೀರ್ ಶಾಬಾನ್ ಉಪಸ್ಥಿತರಿದ್ದರು. ಹಾಗೂ ಝೋನ್ , ಸೆಕ್ಟರ್ ನಾಯಕರು, ಸದಸ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸಹಕರಿಸಿದರು. ನಿಝ್ವ ಝೋನ್ ಪ್ರಧಾನ ಕಾರ್ಯ ಝಿಯಾದ್ ಮಣಿಪುರ ಸ್ವಾಗತಿಸಿ, ಮುಹಮ್ಮದ್ ಹುಸೈನ್ ತೀರ್ಥಹಳ್ಳಿ ರವರು ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.