(www.vknews. in) ; ಕತಾರಿನಲ್ಲಿರುವ ಭಾರತೀಯ ದೂತಾವಾಸದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು (ಐಸಿಸಿ) ತಮ್ಮ ಆವರಣದಲ್ಲಿ ಇಫ್ತಾರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಐಸಿಸಿ ಯ ಅಶೋಕ ಸಭಾಂಗಣವನ್ನು ಸಜ್ಜುಗೊಳಿಸಿ ದೀಪಾಲಂಕಾರದಿಂದ ಆಚರಿಸಲಾಯಿತು. ಐಸಿಸಿ ಅಧ್ಯಕ್ಷರಾದ ಶ್ರೀ ಎಪಿ ಮಣಿಕಂಠನ್ ಅವರು ಸ್ವಾಗತ ಭಾಷಣವನ್ನು ನೀಡಿದರು. ಕತಾರಿಗೆ ಭಾರತದ ರಾಯಭಾರಿಗಳಾದ ಶ್ರೀ ವಿಪುಲ್ ಅವರು ಈ ಸುಸಂದರ್ಭದಲ್ಲಿ ಮಾತನಾಡಿ ಪವಿತ್ರ ರಂಜಾನ್ ತಿಂಗಳಿನ ಮಹತ್ವವನ್ನು ವಿಸ್ತರಿಸುತ್ತಾ, ಎಲ್ಲರಿಗೂ ಆರೋಗ್ಯಕರ ಹಾಗೂ ಆನಂದ ಭರಿತ ರಂಜಾನ್ ಹಬ್ಬವನ್ನು ಆಶಿಸಿದರು. ಕತಾರಿನ ವಿವಿಧ ಮಂತ್ರಾಲಯಗಳ ಗಣ್ಯರು ಹಾಗೂ ಪ್ರತ್ಯೇಕವಾಗಿ ಆಂತರಿಕ ಮಂತ್ರಾಲಯದ ಗಣ್ಯರು ಆಗಮಿಸಿ ಈ ಕಾರ್ಯಕ್ರಮವನ್ನು ಹಾರೈಸಿದರು.
ಈ ಕಾರ್ಯಕ್ರಮವನ್ನು ಭಾರತೀಯ ರಾಯಭಾರಿ ಕಾರ್ಯಾಲಯದ ಅಧಿಕಾರಿಗಳು, ಹಾಗೂ ಇತರ ಸಮಿತಿಯ ಅಧ್ಯಕ್ಷರುಗಳು, ಐಸಿಸಿ ಸಹಯೋಗದೊಂದಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಅಧ್ಯಕ್ಷರುಗಳು ಭಾರತೀಯ ಸಮುದಾಯದ ನಾಯಕರು ಉಪಸ್ಥಿತರಿದ್ದರು.
ಐಸಿಸಿ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರೇ ಆದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು, ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೋಹನ್ ಕುಮಾರ್ ಅವರು ಮತ್ತು ಐಸಿಸಿ ಆಡಳಿತ ಸಮಿತಿಯ ಇತರ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.