ಕಡಬ (www.vknews.in) : 9 ವರ್ಷಗಳ ಹಿಂದೆ ಕಡಬ ತಾಲೂಕು ಐತೂರು ಗ್ರಾಮದಲ್ಲಿ ನಡೆದ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳೆಲ್ಲರನ್ನು ಪುತ್ತೂರಿನ ನ್ಯಾಯಾಲಯವು ವಿಚಾರಣೆ ನಡೆಸಿ ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.
ದಿನಾಂಕ 14.12.2015 ರಂದು, ಕಡಬ ತಾಲ್ಲೂಕು, ಐತೂರು ಗ್ರಾಮದ ಗ್ರಾಮದ, ಒಟ ಕಜೆ ರಬ್ಬರ್ ತೋಟದ ಬದಿಯಲ್ಲಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಿಬ್ಬಂದಿಗಳಾದ ಶ್ರೀ ಶಾಂತಪ್ಪ ಗೌಡ, ರಾಘವ, ಸೆಲ್ವೇಂದ್ರ ರವರು ಬೆಳಿಗ್ಗೆ 10:00ಗೆ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಆರೋಪಿಗಳಾದ ಹರೀಶ, ಬಾಲಸುಬ್ರಮಣ್ಯ, ಸುರೇಶ್, ಕರುಣಾಮೂರ್ತಿ, ಕುಮಾರ ವೇಲು ರವರು ಸೇರಿಕೊಂಡು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ,ಅವರಿಗೆ ಬೆದರಿಕೆ ಒಡ್ಡಿ,ಅವರ ವಾಹನಗಳನ್ನು ಹಾನಿ ಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು.
ಇದಕ್ಕೆ ಕಾರಣವೇನೆಂದರೆ, ಆರೋಪಿಗಳೆಲ್ಲರೂ ಸೇರಿ ಕುಮಾರಧಾರ ರಬ್ಬರ್ ಘಟಕಕ್ಕೆ ಸೇರಿದ, ರಬ್ಬರ್ ಮರಗಳಿಂದ, ರಬ್ಬರ್ ಹಾಳೆಗಳನ್ನು ಕದ್ದು ತಂದು, ಮನ ಮೋಹನ್ ಎಂಬ ವರ ತೋಟದ, ತೆಂಗಿನ ಮರದಡಿಯಲ್ಲಿ ಬಚ್ಚಿಟ್ಟಿದ್ದನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸುವ ಸಮಯ, ಆರೋಪಿಗಳೆಲ್ಲರೂ ಸೇರಿ ಈ ಕೃತ್ಯವನ್ನು ನಡೆಸಿದ್ದಾರೆ ಎಂದು ರಬ್ಬರ್ ತೋಟದ ಅಧೀಕ್ಷಕರಾದ ಜಿಎಸ್ ಕೊಡಿಯ ಎಂಬವರು ಕಡಬ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಈ ದೂರಿನ ಪ್ರಕಾರ ಕಡಬ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದರು
ವಿಚಾರಣೆ ನಡೆಸಿದ ಪುತ್ತೂರಿನ ಎರಡನೇ ಹೆಚ್ಚುವರಿ ಕಿರಿಯ ವಿಭಾಗ ಸಿವಿಲ್ ನ್ಯಾಯಾಧೀಶರಾದ ಶ್ರೀ ಯೋಗೇಂದ್ರರವರು, ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸಲು ಅಭಿಯೋಜನ ಪಕ್ಷ ವಿಫಲವಾದ ಹಿನ್ನೆಲೆಯಲ್ಲಿ, ಆರೋಪಿಗಳೆಲ್ಲರನ್ನು ದೋಷ ಮುಕ್ತಗೊಳಿಸಿ, ಬಿಡುಗಡೆಗೊಳಿಸಿ ಆದೇಶಿಸಿದೆ, ಆರೋಪಿಗಳಲ್ಲರ ಪರವಾಗಿ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತು ಸಾತ್ವಿಕ್ ಆರಿಗ ಬಿ ವಾದಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.