ಶಿರಸಿಯಲ್ಲಿ 1988ರ ಮೇ 28 ಹಾಗೂ 29 ರಂದು ಜರುಗಿದ್ದ ಅಖಿಲ ಭಾರತ ಕನ್ನಡ ಜನಪರ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಡಿದ್ದ ಕನ್ನಡದ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸ್ಸಾರ ಅಹಮ್ಮದ್. (ಎಡದಿಂದ) ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ, ಕನ್ನಡ ಹೋರಾಟಗಾರ ದಿ.ರಾಮ ಜಾಧವ, ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ದಿ.ಕಯ್ಯಾರ ಕಿಞ್ಞಣ್ಣರೈ, ಶಿರಸಿಯ ಎಸ್.ಆರ್.ಹೆಗಡೆ ಕಡವೆ, ಹಿರಿಯ ಸಾಹಿತಿ ದಿ. ಡಾ.ಆರ್. ಸಿ. ಹಿರೇಮಠ ಮುಂತಾದವರು ಚಿತ್ರದಲ್ಲಿದ್ದಾರೆ.
ಧಾರವಾಡ (www.vknews.com) : ‘ನಾನು ಕನ್ನಡದ ಒಂದೊಂದೂ ಅಕ್ಷರವನ್ನು ಬೆವರು ಹರಿಸಿ ಕಲಿತಿದ್ದೇನೆ’ ಎಂದೆಲ್ಲ ಕನ್ನಡ ಕಲಿಕೆಯನ್ನು ಅತ್ಯಂತ ಅಭಿಮಾನದಿಂದ ಹೇಳಿಕೊಂಡಿರುವ ಕನ್ನಡದ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್. ನಿಸ್ಸಾರ ಅಹಮ್ಮದ್ ಅವರ ಅಗಲಿಕೆಗೆ ಇಲ್ಲಿಯ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
1988ರ ಮೇ 28 ಹಾಗೂ 29 ರಂದು ಉ.ಕ. ಜಿಲ್ಲೆ ಶಿರಸಿ ನಗರದಲ್ಲಿ ಹಿರಿಯ ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಹಾಗೂ ಇತರೇ ಸಮಕಾಲೀನ ಬರಹಗಾರರು ಹಮ್ಮಿಕೊಂಡಿದ್ದ ‘ಅಖಿಲ ಭಾರತ ಕನ್ನಡ ಜನಪರ ಸಾಹಿತ್ಯ ಸಮ್ಮೇಳನ’ದಲ್ಲಿ ಡಾ. ನಿಸ್ಸಾರ್ ಅಹಮ್ಮದ್ ಅವರೊಂದಿಗೆ ಪಾಲ್ಗೊಂಡಿದ್ದ ನೆನಪುಗಳನ್ನು ಡಾ. ಯರಗಂಬಳಿಮಠ ಸ್ಮರಿಸಿಕೊಂಡಿದ್ದಾರೆ. ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ-ಸಂಸ್ಕøತಿ-ಪರಂಪರೆಯ ಘನತೆಯಲ್ಲಿ ಜನಪರ ಚಿಂತನೆಯ ಆಶಯಗಳ ಕುರಿತು ವಿಸ್ತøತವಾಗಿ ಮಾತನಾಡಿ ಗಮನಸೆಳೆದದ್ದನ್ನು ಮರೆಯಲಾಗದು ಎಂದಿದ್ದಾರೆ.
ಕುಂಟಿ ಶೋಕ : ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ವಿಕಾಸದ ವಿಷಯದಲ್ಲಿ ಅಪಾರ ಕಾಳಜಿ, ಬದ್ಧತೆ ಮತ್ತು ಅಭಿಮಾನವನ್ನು ಹೊಂದಿದ್ದ ಪ್ರೊ. ನಿಸ್ಸಾರರ ಅಗಲಿಕೆಯಿಂದ ಕನ್ನಡ ನಾಡು ಮತ್ತು ವಾಙ್ಮಯ ಲೋಕ ಬಡವಾದಂತಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ, ಹಿರಿಯ ಲೇಖಕ ನಿಂಗಣ್ಣ ಕುಂಟಿ (ಇಟಗಿ) ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.