ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮೇ 12 ರಂದು ರಾತ್ರಿ ದುಬೈಯಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ 179 ಪ್ರಯಾಣಿಕರ ಪೈಕಿ 33 ಮಂದಿ ಹಣವಿಲ್ಲದ ಕಾರಣ ಹೋಟೆಲ್ ಬದಲಿಗೆ ಹೋಸ್ಟೆಲ್ ಬುಕ್ ಮಾಡಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಮಾಡದೇ ಹಸಿವಿನಿಂದ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತೆ ಮಾಡಿದ ಸರಕಾರದ ವೈಫಲ್ಯವನ್ನು ಮಂಗಳೂರು ಶಾಸಕರಾದ ಯು.ಟಿ.ಖಾದರ್ ಖಂಡಿಸಿದ್ದಾರೆ.
ಹಣ ಕೊಟ್ಟು ಹೋಟೆಲ್ ಬುಕ್ ಮಾಡಲು ಅಶಕ್ತರಾದ 33 ಪ್ರಯಾಣಿಕರಿಗೆ ಜಿಲ್ಲಾಡಳಿತ ಸರಕಾರದ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಅಂತಹ ಪ್ರಯಾಣಿಕರಿಗೆ ಸರಿಯಾದ ಸೌಲಭ್ಯ ಕಲ್ಪಿಸುವ ಬಗ್ಗೆ ಈ ಹಿಂದೆಯೇ ಜಿಲ್ಲಾಡಳಿತ ಭರವಸೆಯನ್ನು ಕೂಡಾ ನೀಡಿತ್ತು.
ಆದರೆ ಪ್ರಥಮ ವಿಮಾನದಲ್ಲಿ ಆಗಮಿಸಿರುವ ಇಂತಹ ಪ್ರಯಾಣಿಕರ ಬಗ್ಗೆ ಕರುಣೆ ತೋರದೇ ಅವರು ಮಧ್ಯರಾತ್ರಿ ತನಕ ಹಸಿವಿನಿಂದ ವಿಮಾನ ನಿಲ್ದಾಣದಲ್ಲಿ ಕಾಲ ಕಳೆದಿದ್ದಾರೆ. ರಾತ್ರಿ 2 ಗಂಟೆ ನಂತರ ಅವರನ್ನು ಹೋಟೆಲ್ ಗೆ ರವಾನಿಸಿ ಹಣ ಕಟ್ಟಬೇಕಾದೀತು ಎಂಬ ತಾಕೀತು ಹಾಕಿದ್ದಾರೆ. ಈ ಕ್ರಮ ಸರಿಯಲ್ಲ. ಇದನ್ನು ಇಂದು ಜಿಲ್ಲಾಡಳಿತದೊಂದಿಗೆ ಪ್ರಶ್ನಿಸುವೆನು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.