(www.vknews.com) : ಹಳ್ಳಿ ಅದೆಷ್ಟು ಸುಂದರ ಅಲ್ವಾ..? ಇಲ್ಲಿ ಎಲ್ಲದಕ್ಕೂ ಅರ್ಥವಿದೆ , ಸಂಬಂಧವಿದೆ , ಅರಿಯದ ಅನುಭೂತಿ ಇದೆ. ಪ್ರಕೃತಿಯ ಆಕರ್ಷಣೆ ಇದೆ. ಪರಸ್ಪರ ಪ್ರೇಮವಿದೆ ನಗುವಿದೆ ಎಲ್ಲಾವೂ ಸುಂದರ ನಿಜಕ್ಕೂ ಹಳ್ಳಿಯ ಮಣ್ಣಿಗೂ ನನಗೂ ಅದ್ಯಾವ ಜನ್ಮದ ಮೈತ್ರಿ ಇದೆಯೋ ಏನೋ…?
ಹೇಳಿ ಕೇಳಿ ನಾನು ಕವಯತ್ರಿ ಹಳ್ಳಿ ಎಂದು ಕರೆಯುವ ರೀತಿಗೆ ಅದರಲ್ಲಿರುವ ಬೆರೆವ ಪ್ರೀತಿಗೆ ಸಾಟಿನೇ ಇಲ್ಲವೆಂದು ಎದೆಯೊಡ್ಡಿ ನಿಲ್ಲೋ ಈ ಭೂಮಿ ಅಡಿಕೆ ಮರಗಳ ಸಾಲಿನ ಮಧ್ಯೆ ಮಳೆಬಿಲ್ಲಿನ ವೈಯಾರ ಅಲ್ಲಿಂದ ತೊಟ್ಟಿಕ್ಕಿ ಕೆಳಗೆ ಉದುರುವ ಹನಿ ಓಹೋ ಒಂದ್ಕಕೊಂಡು ಅದೆಷ್ಟು ಅದ್ಭುತವಾಗಿ ಬೆರೆತು ಹೋಗಿವೆ. ನಿಜವಾದ ಪ್ರೀತಿ ಇಲ್ಲೇ ಇದೆ ನೆಲ ಜಲಕ್ಕಿಂತ ಆದರ್ಶ ಹೊಂದಾಣಿಕೆಗೆ ಬೇರೆ ಅರ್ಥ ಬೇಡವೇನೋ..! ಎಂಬಂತೆ ಎರಡು ಬೆರೆತು ಒಂದಕ್ಕೊಂದು ತಬ್ಬಿರುವುದ ಕಂಡರೆ ಬೇರೆ ಮಾಡಲು ಯಾರಿಂದಲೂ ಸಾಧ್ಯವೇ ಇಲ್ಲದ ರೀತಿ ನಮಗೆಲ್ಲಾ ಬದುಕ ನೀಡುತ್ತೆ ಆದರೆ ಅದಕ್ಕಿರುವ ರೂಪ , ಗುಣ , ಜೀವನಾತ್ಮಕ ಭಾವನೆಗಳು ಎಲ್ಲಾದರ ಆಸ್ತಿತ್ವವೂ ಒಂದಕ್ಕೊಂದು ಪ್ರೇರಕ.. ಈ ಮಧುರ ಕ್ಷಣವನ್ನು ಅಲಿಂಗಿಸಲು ಮನಸಾರೆ ಹಳ್ಳಿಯ ಬದುಕನ್ನು ಒಪ್ಪಿ ಆರಂಭಿಸಿದ ದಿನ ಅದ್ಭುತವೇ.. ಈ ಖುಷಿಯಲ್ಲೇ ಪಟ್ಟಣದಿಂದ ಹಳ್ಳಿಗೆ ಅಡಿ ಇಟ್ಟವಳಿಗೆ ತಲೆ ಮೇಲೆ ಕುದಿಯುವ ನೀರು ಸುರಿದಂತ ಅನುಭವವಾಗಿದ್ದು.. ಹೌದು ನಮ್ಮ ಇಂದಿನ ಹಳ್ಳಿಗಳು ಹಿಂದಿನ ಹಳ್ಳಿಗಳಂತಿಲ್ಲ ಪಟ್ಟಣದ ಯಾಂತ್ರಿಕ ಹಾಗೂ ನಾಜೂಕಿನ ಬದುಕು ಹಳ್ಳಿಯವರನ್ನು ಆವರಿಸಿ ಆಧುನಿಕ ಜೀವನ ಸ್ಥಿತಿಯನ್ನು ಪಟ್ಟಣದವರಿಗಿಂತ ಹೆಚ್ಚಾಗಿ ಅನುಸರಿಸುತ್ತಿದ್ದಾರೆ..
ಇದರಲ್ಲಿ ಒಗ್ಗಟ್ಟಿನ ಮಾತೇ ಇಲ್ಲ ತಮ್ಮ ಪಾಡಿಗೆ ತಾವು ಎಂಬಂತೆ ಇರಲಿಚ್ಚಿಸುತ್ತಾರೆ ಕೆಲವರು ಇನ್ನು ಕೆಲವರು ಪಟ್ಟಣದ ಸಂಸ್ಕೃತಿಯ ದಾಸ್ಯಕ್ಕೆ ಅನುಸರಿಸಿ ಹಳ್ಳಿಯ ಆಧುನಿಕ ಸ್ತ್ರೀಯರಲ್ಲಿ ಕೆಲವರು ಅಶಾಂತಿ , ಆಶಿಸ್ತು ಮತ್ತು ಅಜಾಗರೂಕ ನಡವಳಿಕೆಯಿಂದ ಸಮಾಜದೊಳಗಿನ ಶಿಸ್ತು , ಕಟ್ಟು ಪಾಡುಗಳನ್ನು ಸಡಿಲ ಗೋಲಿಸುತ್ತಿದ್ದಾರೆ .. ತೃಪ್ತಿ ಇಲ್ಲದ ಅತೃಪ್ತಿ ಅವರಲ್ಲಿ ಮನೆ ಮಾಡಿ ಸಮಾಜದ ಇಡೀ ವ್ಯವಸ್ಥೆಯನ್ನೇ ಹಾಳುಗೆಡುವ ಮಟ್ಟಕ್ಕೆ ಹೋಗುತ್ತಾ ಪಟ್ಟಣದ ಸಂಸ್ಕೃತಿಯೆಡೆ ವಾಲುತ್ತಿದ್ದಾರೆ..!
ಸ್ತ್ರೀ , ಪುರುಷನಿಗೆ ಸಮಾನತೆ , ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಚಾಚಾರಿಗಳಾಗಿ ತಾವು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಎಗ್ಗಿಲ್ಲದೆ ನಡೆದುಕೊಳ್ಳುತ್ತಾ ಇದ್ದಾರೆ ಇದನ್ನೆಲ್ಲಾ ಪ್ರೇಶ್ನಿಸಿ ತಿಳಿ ಹೇಳಿದವರನ್ನೇ ದೂಷಿಸುತ್ತಾ ಗುಂಡಾ ಪ್ರವೃತ್ತಿಯಲ್ಲಿ ಮರೆಯುತ್ತಿದ್ದಾರೆ..!
ತಾಳ್ಮೆ , ಸಂಯಮವನ್ನು ಕಳೆದುಕೊಂಡು ಅಹಂ , ದರ್ಪ , ದೌಲತ್ತನ್ನು ಪ್ರದರ್ಶಿತ್ತಿದ್ದಾಳೆ !
ಇಲ್ಲಿ ದ್ವೇಷ – ಕಲಹ ಜೊತೆಗೆ ಚಾಡಿ ತುಂಬಿ ತುಳುಕಾಡುತ್ತಿದೆ , ಅದರಲ್ಲೂ ಆಧುನಿಕತೆ ಹೆಸರಿನಲ್ಲಿ ಸೋಗು ಹಾಕಿಕೊಂಡು ಬೆಳಗಿನಿಂದ ಸಂಜೆಯವರೆಗೂ ಕಟ್ಟೆ ಹರಟೆ ಹೊಡೆಯುತ್ತಾ ಬಂಧು – ಬಳಗ ಎಂಬ ರಕ್ತ ಸಂಬಂಧವನ್ನೇ ಕಿತ್ತು ಗುಂಪು – ಗುಂಪುಗಳನ್ನು ಸೃಷ್ಟಿಸಿ , ಕಲಹವನ್ನು ಹುಟ್ಟು ಹಾಕುತ್ತಿರುವ ಹಳ್ಳಿ ಮಹಿಳೆಯರ ನಾಗರಿಕತೆ ಇದು..
ಪಟ್ಟಣಗಳ ಐಷಾರಾಮಿತನ ಕಂಡು ಬರಲು ಕಷ್ಟ ಪಟ್ಟು ದುಡಿದ ಹಣವನ್ನು ಸಿಕ್ಕ – ಸಿಕ್ಕಲ್ಲಿ ಪೋಲು ಮಾಡುತ್ತಿದ್ದಾರೆ ಇದೆಲ್ಲಾವನ್ನೂ ನೋಡುತ್ತಿದ್ದರೆ ನಮ್ಮ ಮಹಿಳೆಯರ ಬದುಕು ಎತ್ತಲಿಂದ ಎತ್ತಲಿಗೆ ಸಾಗಿದೆ ಎಂದು ಅನಿಸದೆ ಇರುವುದಿಲ್ಲ..
ಸ್ತ್ರೀ ಕನಸು ಹೌದು , ವಾಸ್ತವವೂ ಹೌದು , ಪ್ರಕೃತಿಗೂ ಸ್ತ್ರೀಗೂ ಅವಿನಾಭಾವ ಸಂಬಂಧವಿದೆ . ಆಕೆ ಭೂಮಿಯಾಗಿ ಅದಕ್ಕಿಂತಲೂ ಮಿಗಿಲಾಗಿ ಮೇರು ಪರ್ವತವಾಗಿ ಇಂದು ಬೆಳೆದು ನಿಂತಿದ್ದಾಳೆ .. ಇಡೀ ವಿಶ್ವವೇ ಆರೋಗ್ಯಕರ ಮನೋಭಾವ ಒಂದಲೂ ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ ಆದರೆ…! ಈ ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀ ಯಾರಲ್ಲೂ ಹಲವು ವಿಧ ವಿಧದ ಮಹಿಳೆಯರನ್ನು ಕಾಣಬಹುದು.!
ಒಂದು ಜೀವವನ್ನು ಜೀವನವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ ಖಂಡಿತಾ ಅವಳಿಗೆ ಅನಂತವಾದ ಶಕ್ತಿ ಇದೆ ಎಂದಾರ್ಥವಲ್ಲವೇ..?
ಕೆ.ಜಿ.ಸರೋಜಾ ನಾಗರಾಜ್
ಆದ್ದರಿಂದ ಮಹಿಳೆ ಸಕಾಲದಲ್ಲಿ ಎಚ್ಛೆತ್ತುಕೊಂಡು ಅವಳು ತಾನು ತನ್ನ ಜವಾಬ್ದಾರಿಗಳನ್ನು – ಆಚಾರ – ವಿಚಾರಗಳನ್ನು ಅನುಸರಿಸಿ ಸಂಸ್ಕೃತಿಯನ್ನು ಗೌರವಿಸಬೇಕು.. ನಮ್ಮ ಸಂಸ್ಕೃತಿಯನ್ನು ಪೂಜಿಸಬೇಕು .. ಕೊನೆಯದಾಗಿ ಈ ಬದುಕಿನಲ್ಲಿ ಸ್ನೇಹ – ಸಂಬಂಧ ಸೊರಗದಂತೆ ಪ್ರೀತಿ ಕರಗದಂತೆ ಆಧುನಿಕ ಮೋಹವನ್ನು ಬಿಟ್ಟು ಮಾನವ ಸಹಜವಾದ ಬಂಧವನ್ನು ಉಳಿಸಿಕೊಂಡು ಹೋದರೆ ಹಳ್ಳಿಯ ಬಾಳು ಹಸನಗುವುದು ..
“ಮುರುಟಿ ಹೋಗುವ ಮೊದಲು ಎಚ್ಛೆತ್ತುಕೊಳ್ಳಿ”…
ಲೇಖಕಿ : ಕೆ.ಜಿ.ಸರೋಜಾ ನಾಗರಾಜ್, ಪಾಂಡೋಮಟ್ಟಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.