(ವಿಶ್ವ ಕನ್ನಡಿಗ ನ್ಯೂಸ್) : ದಿನಾಂಕ 30-05-2020 ರ ಶನಿವಾರ ಜಿಲ್ಲಾ ಕಚೇರಿಯಲ್ಲಿ ಜಿಲ್ಲೆಯ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಘಟಕಾಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಪ್ರಾರಂ¨ದಲ್ಲಿ ಜೂನ್ನಿಂದ ಪ್ರಾರಂಭವಾಗುವ ಮಾನ್ಸೂನ್ ಸಿದ್ದತೆಯ ಬಗ್ಗೆ ಪ್ರತಿ ಘಟಕಗಳಲ್ಲಿ ಸಿಬ್ಬಂದಿಗಳನ್ನು ಗುರುತಿಸಿ ಸಿದ್ದವಾಗಿರುವಂತೆ ಸೂಚಿಸಿದರು. ಮಂಗಳೂರಿನ ತಾಲ್ಲೂಕಿನ ಸಮುದ್ರದ ಕಿನಾರಗಳಾದ ಸೋಮೇಶ್ವರ, ಉಲ್ಲಾಳ, ಮೊಗವೀರ ಪಟ್ನ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಸುರತ್ಕಲ್ ಮತ್ತು ಫಾತಿಮ ಬೀಚ್ಗಳಲ್ಲಿ ಗೃಹರಕ್ಷಕರನ್ನು ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ನಿಯೋಜಿಸಲಾಗುವುದು ಎಂದು ಸಮಾದೇಷ್ಟರು ನುಡಿದರು.
ನೆರೆ ಪೀಡಿತ ಪ್ರದೇಶಗಳಾದ ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಪ್ರದೇಶಗಳಲ್ಲಿ ಗೃಹರಕ್ಷಕರು ಸನ್ನದ್ದರಾಗಿರುವಂತೆ ಘಟಕಾಧಿಕಾರಿಗಳಿಗೆ ಮತ್ತು ಗೃಹರಕ್ಷಕರಿಗೆ ಸೂಚಿಸಿದರು. ಎಲ್ಲಾ ಘಟಕಗಳಲ್ಲಿಯೂ ಲೈಫ್ ಬಾಯ್, ಲೈಫ್ ಜಾಕೆಟ್, ರೋಪ್, ವುಡ್ಕಟಲ್, ಟಾರ್ಚ್ ಲೈಟ್ಗಳನ್ನು ಸಿದ್ದಪಡಿಸಿ ಮುಂಜಾಗರೂಕತೆ ತೆಗೆದುಕೊಳ್ಳಲು ಘಟಕಾಧಿಕಾರಿಗಳಿಗೆ ಆದೇಶಿಸಿದರು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ 60 ಗೃಹರಕ್ಷಕರು ಪ್ರವಾಹ ರಕ್ಷಣಾ ತಂಡ ರಚಿಸಿ ಜನರ ಮತ್ತು ಆಸ್ತಿ ಪಾಸ್ತಿ ರಕ್ಷಣೆಗೆ ಸದಾ ಸನ್ನದ್ದರಾಗಿಬೇಕು ಎಂದು ಸಾಮದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಅವರು ಕರೆ ನೀಡಿದರು. ಕಾರ್ಯಕ್ರಮದ ವಿವಿಧ ಘಟಕಗಳ ಘಟಕಾಧಿಕಾರಿ ಹಾಗೂ ಪ್ರಭಾರ ಘಟಕಾಧಿಕಾರಿಯಾದ ಸುಳ್ಯ ಜಯಂತ್ ಶೆಟ್ಟಿ, ಮೂಡಬಿದ್ರೆಯ ಪಾಂಡಿರಾಜ್, ದಿನೇಶ್ ಬಿ ಉಪ್ಪಿನಂಗಡಿ, ಅಭಿಮನ್ಯು ರೈ, ಪುತ್ತೂರು, ಹೆಚ್.ನಾರಾಯಣ, ಸುಬ್ರಹ್ಮಣ್ಯ ಘಟಕ, ಮಂಗಳೂರು ಘಟಕದ ಮಾರ್ಕ್ ಶೇರ್, ಶಿವಪ್ಪ ನಾಯಕ್, ಪಣಂಬೂರು, ರಮೇಶ್, ಸುರತ್ಕಲ್, ಬೆಳ್ಳಾರೆಯ ವಸಂತ್, ತೀರ್ಥೇಶ್ ಕಡಬ,. ಐತಪ್ಪ ಬಂಟ್ವಾಳ, ಜಯಾನಂದ, ಬೆಳ್ತಂಗಡಿ, ಲೋಕೇಶ್, ಮುಲ್ಕಿ, ಜಿಲ್ಲೆಯ ಉಪ ಸಮಾದೇಷ್ಟರಾದ ರಮೇಶ್, ಸ್ವಾಗತಿಸಿದರು. ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ್ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.