(www.vknews.com) : ಇ ಫ್ರೆಂಡ್ಸ್ ನಿಂದ ಕೊರೊನ ಕೋವಿಡ್ -19 ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಅಭಿಯಾನ ಮೂಡಿಸುವ ಮೂಲಕ ದೇಶದ್ಯಂತ ಜನತಾ ಕರ್ಪ್ಯೂ ಹಾಗು ಲಾಕ್ ಡೌನ್ನಿಂದ ಆರಂಭಗೊಂಡು ರಮಾದಾನ್ ತಿಂಗಳಿಂದ ಈದ್ ಹಬ್ಬದ ವರಗೆ ಇ ಫ್ರೆಂಡ್ಸ್ ಜಮಾತ್ ಸರ್ವೇಮಾಡಿದ ತಾಲೂಕಿನ ಪರಿಸರದಲ್ಲಿ ಸಂಕಷ್ಟದಲ್ಲಿರುವ ಅರ್ಹ ಮಧ್ಯಮ ವರ್ಗ ಹಾಗು ಬಡ ಕುಟುಂಬಗಳಿಗೆ ನಿರಂತರ ಐದು ಹಂತಗಳಲ್ಲಿ ಕೋವಿಡ್ ಎಮರ್ಜೆನ್ಸಿ ರಿಲೀಫ್ ಹಾಗು ರಮದಾನ್ ಕಿಟ್ ಮತ್ತು ಈದ್ ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಲಾಕ್ ಡೌನ್ ಸಮಯದಲ್ಲಿ ತುರ್ತು ರೋಗಿಗಳಿಗೆ ರಕ್ತದ ಕೊರತೆ ನೀಗಿಸಲು ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜೊತೆ ಸೇರಿ ಇ ಫ್ರೆಂಡ್ಸ್ ಸದಸ್ಯರುಗಳಿಂದ ರಕ್ತದಾನ ಶಿಬಿರ , ಡಯಾಲಿಸಿಸ್ ಚಿಕಿತ್ಸೆ ಮಾಡಲು ಬಂದ ರೋಗಿಗಳನ್ನು ನಿರಂತರ ಚಿಕಿತ್ಸಾ ಕೇಂದ್ರ ನಂತರ ಮನೆಗೆ ತಲುಪಿಸುವ ವ್ಯವಸ್ಥೆ ಮತ್ತು ಅನಾರೋಗ್ಯದಿಂದ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ವೆಚ್ಚ ಭರಿಸಲಾಗದೆ ಕಂಗೆಟ್ಟಿದ್ದ ಹಲವು ಕುಟುಂಬಗಳಿಗೆ ಡಿಸ್ಚಾರ್ಜ್ ಆಗಲು ದನ ಸಹಾಯ ಹಾಗು ರೋಗಿಗಳಿಗೆ ಮೆಡಿಸಿನ್ ವಿತರಣೆ ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಯಿರುವರಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಕಲ್ಪಿಸಲಾಯಿತು.
ಇ ಫ್ರೆಂಡ್ಸ್ ಸಮೀಕ್ಷೆ ನಡೆಸಿದ ಜಮಾಹತ್ ವ್ಯಾಪ್ತಿಯಲ್ಲಿರುವ ತೀರಾ ಶೋಚನೀಯ ಮನೆಗಳ ಸ್ಥಿತಿಗತಿ ವೀಕ್ಷಣೆ, ಮತ್ತು ಅಲ್ಲಿರುವ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ಮನೆ ದುರಸ್ಥಿ ಕಾರ್ಯಕ್ಕೆ ದನ ಸಹಾಯ ಶಾಶ್ವತ ಪರಿಹಾರವಾಗಿ ದಾನಿಗಳ ಸಹಾಯದಿಂದ ಹೊಸ ಮನೆ ನಿರ್ಮಿಸಿಕೊಡುವ ಬಗ್ಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಯೆಂದು ಇ ಫ್ರೆಂಡ್ಸ್ ಅಧ್ಯಕ್ಷರು ಡಾ:ಸರ್ಫ್ರಾಜ್ ಇಸ್ಮಾಯಿಲ್ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.