(ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ದಿನೇ ದಿನೇ ಹೆಚ್ಚುತ್ತಾ ಇದೆ. ರಾಜ್ಯ ಸರಕಾರ ಹಾಗು ಕೇಂದ್ರ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡಿದೆ. ಅಂದರೆ ಕೊರೋನಾ ವೈರಸ್ ಮಾಯವಾಗಿದೆ ಎಂದು ಅರ್ಥವಲ್ಲ. ದೇಶದ, ರಾಜ್ಯದ ಆರ್ಥಿಕ ಸ್ಥಿತಿ ಪಾತಾಳಕ್ಕೆ ತಲುಪದಿರಲಿ ಎಂಬ ಉದ್ದೇಶದಿಂದಷ್ಟೇ ಲಕ್ಡೌನ್ ಸಡಿಲಿಕೆ ಮಾಡಿರುವುದು.
ಆದರೆ ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯದ ಆರೋಗ್ಯ ಸಚಿವರು ಎಂದು ಹೇಳುವವರು ಬಾಗಿನ ಅರ್ಪಣೆ ಮಾಡುವ ಹೆಸರಿನಲ್ಲಿ ಯಾವುದೇ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವಿಲ್ಲದೆ, ದೊಡ್ಡ ಮೆರವಣಿಗೆ ಮಾಡಿದ್ದಾರೆ. ಸಾರ್ವಜನಿಕರು ಯಾವುದೇ ಸಾಮಾಜಿಕ ಅಂತರವಿಲ್ಲದೆ ಮುಗಿ ಬೀಳುತ್ತಿರುವುದು ಕಾಣಿಸುತ್ತಿದೆ.
ಇವರು ಆರೋಗ್ಯ ಸಚಿವರಾಗಿ ಈ ಕೊರೋನಾ ಸಂದರ್ಭದಲ್ಲಿ ಯಾವುದೇ ಒಳ್ಳ್ಳೆಯ ಕೆಲಸ ಮಾಡಿಲ್ಲ. ಆದರೆ ಇದೀಗ ಮೆರವಣಿಗೆ ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ. ಇವರ ಈ ನಡೆಯ ಬಳಿಕ ರಾಜ್ಯದ ಜನತೆ ಇವರು ಆರೋಗ್ಯ ಸಚಿವರೋ? ಅಥವಾ ಅನಾರೋಗ್ಯ ಸಚಿವರೋ? ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಇವರನ್ನು ಸಂಪುಟದಿಂದ ಕೈಬಿಡಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
– Qayhan K, ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.