(www.vknews.com) : ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಗಳ ಸಮನ್ವಯ ವೇದಿಕೆಯು ಸುಮಾರು 20 ವರ್ಷಗಳಿಂದ ರಾಜ್ಯಾದ್ಯಂತ ಖ್ಯಾತ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ. ವಿ ಪಿ. ರವರ ಮಹಾ ಪೋಷಕತ್ವದಲ್ಲಿ ,ಹಾಗೂ ಮಗು ಮತ್ತು ಕಾನೂನು ಕೇಂದ್ರ (ಎನ್.ಎಲ್.ಎಸ್.ಐ.ಯು.) ಬೆಂಗಳೂರು ಇದರ ಸಹಯೋಗದೊಂದಿಗೆ ,ಸರಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಗಳಾಗಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ನಿರ್ವಹಿಸುತ್ತಿದೆ .
ಕೋವಿದ್ 19 ಕೊರೋನ ದ ಕಾರಣದಿಂದ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಕಾರ್ಯಾಚರಿಸುವ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ದಿನಾಂಕ 1/6/2020 ರಂದು ಮಾನ್ಯ ಶಿಕ್ಷಣ ಸಚಿವರು ಸಭೆಯನ್ನು ಕರೆದು ,ಶಾಲೆಗಳನ್ನು ತೆರೆಯುವ ಬಗ್ಗೆ ಸರಕಾರಿ ಶಾಲೆಗಳ ವಾರಸುದಾರರಾದ ಎಸ್ ಡಿ ಎಂ ಸಿ ಸದಸ್ಯರು ಹಾಗು ಪಾಲಕರ ಪ್ರತಿನಿಧಿ ಗಳಿಂದ ಸಲಹೆಗಳನ್ನು ಪಡೆಯುವ ಬಗ್ಗೆ ತಿಳಿಸಿರುತ್ತಾರೆ.
ಈ ಪ್ರಯುಕ್ತ ಈ ತಿಂಗಳ ದಿನಾಂಕ 10,11,12 ರಂದು ಶಾಲಾ ಮುಖ್ಯಸ್ಥರು ಎಸ್ ಡಿ ಎಂ ಸಿ ಸಭೇಕರೆದು ಅಭಿಪ್ರಾಯವನ್ನು ದಾಖಲಿಸುವಂತೆ ಸೂಚಿಸಿರುತ್ತಾರೆ. ಆದರಿಂದ ಜಿಲ್ಲೆಯ ಎಲ್ಲಾ ಶಾಲೆಯ ಎಸ್ ಡಿ ಎಂ ಸಿ ಅದ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು , ಜೀವಕ್ಕೆ ಪ್ರಾಮುಖ್ಯತೆ ಇರೋದರಿಂದ ಅದರ ಬಗ್ಗೆ ಕಾಳಜಿ ವಹಿಸಿ ಒಳ್ಳೆಯ ಸಲಹೆಯನ್ನು ಮಾನ್ಯ ಸಚಿವರಿಗೆ ಕಳುಹಿಸಿ ಕೊಡಲು ತಾವೆಲ್ಲರೂ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.
ಹೆಚ್ಚಿನ ಮಾಹಿತಿಗೆ ನಮ್ಮ ಮಹಾ ಪೋಷಕರಾದ ಡಾ. ನಿರಂಜನಾರಾಧ್ಯ. ವಿ. ಪಿ ಯವರು ಈಗಾಗಲೇ ಸರಕಾರಕ್ಕೆ ಕೊಟ್ಟಿರುವ ಸಲಹೆಗಳನ್ನು ಕೂಡ ಓದಿ ಕೊಳ್ಳಬೇಕಾಗಿ ವಿನಂತಿಸುತ್ತೇವೆ.
ಮೊಯ್ದಿನ್ ಕುಟ್ಟಿ ರಾಜ್ಯಾಧ್ಯಕ್ಷ ರು ಎಸ್. ಡಿ ಎಂ ಸಿ ಸಮನ್ವಯ ವೇದಿಕೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.