(www.vknews.com) : ಇಸ್ಲಾಮಿಕ್ ಎಜ್ಯುಕೇಶನಲ್ ಭೋರ್ಡ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ವ್ಯಾಪ್ತಿಯ ಮದ್ರಸ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅವರವರ ಮನೆ ಪರಿಸರದಲ್ಲಿ “ನಾಳೆಗೊಂದು ನೆರಳು” ಎಂಬ ಧ್ಯೇಯ ದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಜೂ.ಐದು ವಿಶ್ವ ಪರಿಸರ ದಿನ ಪ್ರಯುಕ್ತ ಬೆಳಿಗ್ಗೆ ಯಿಂದಲೇ ಸನ್ನಿ ಬಾಲ ಸಂಘ ಎಸ್ ಬಿ ಎಸ್ ವಿಧ್ಯಾರ್ಥಿಗಳು ಅತ್ಯುತ್ಸಾಹದಿಂದ ರಕ್ಷಕ ಪೋಷಕರ ಸಹಕಾರ ದೊಂದಿಗೆ ಮನೆಯಂಗಳದಲ್ಲಿ ಹಣ್ಣು ಹಂಪಲುಗಳ, ತರಕಾರಿಗಳ,ಮತ್ತಿತರ ಸಸಿಗಳನ್ನು ನೆಟ್ಟು ಆಯಾ ಮದ್ರಸ ಅಧ್ಯಾಪಕರುಗಳಿಗೆ ಮಾಹಿತಿ ನೀಡಿದರು. ಅಧ್ಯಾಪಕರುಗಳು ಈ ಮೊದಲು ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಗುಣವನ್ನು ವಿವರಿಸಿ ಪ್ರೋತ್ಸಾಹ ನೀಡಿರುವರು.
ಕೋವಿಡ್ 19 ಹಿನ್ನೆಲೆಯಲ್ಲಿ ಮದ್ರಸ ಮುಚ್ಚಲ್ಪಟ್ಟಿದ್ದು ಸೋಶಿಯಲ್ ನೆಟ್ವರ್ಕ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ. ಪ್ರಸ್ತುತ ಕಾರ್ಯಚಟುವಟಿಕೆಗಳು ಸುಳ್ಯ ರೇಂಜ್ ಪದಾಧಿಕಾರಿಗಳ ಸಹಭಾಗಿತ್ವದಲ್ಲಿ ಮಿಶನರಿ ವಿಭಾಗದ ಮೇಲ್ನೋಟದಲ್ಲಿ ನಡೆಯುತ್ತಿದೆ.ಮಿಶನರಿ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸಖಾಫಿ ಕಟ್ಟತ್ತಾರು ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.