ಪುತ್ತೂರು (www.vknews.com) : ತಾಲೂಕಿನ ಬಡಗನ್ನೂರು ಗ್ರಾಮದಲ್ಲಿರುವ ಮುಂಡೋಳೆ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಶುಕ್ರವಾರ ಜುಮಾ ನಮಾಝ್ ಪ್ರಾರಂಭಗೊಂಡಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದು 11 ವಾರಗಳ ಕಾಲ ಸ್ಥಗಿತಗೊಂಡಿದ್ದ ಜುಮಾ ನಮಾಝ್ ಅನ್ನು ಸರಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಹಲವು ನಿಬಂಧನೆಗಳ ಮೂಲಕ ಪ್ರಾರಂಭಗೊಳಿಸಲು ನಿಶ್ಚಯಿಸಲಾಗಿತ್ತು.
ನಮಾಜ್ ಮಾಡುವವರೆಡೆಯಲ್ಲಿ ಸುರಕ್ಷಿತ ಅಂತರ, ರಿಜಿಸ್ಟ್ರೇಷನ್, ಸ್ಯಾನಿಟೈಸರ್, ಸೋಪಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಹೊಸ ನಿಯಮಾವಳಿಗಳನ್ನೊಳಗೊಂಡ ಫಲಕವನ್ನು ಮಸೀದಿ ಅವರಣದಲ್ಲಿ ಅಳವಡಿಸಲಾಗಿತ್ತು. ಅಲ್ಲದೆ ಈ ಕುರಿತ ಮಾಹಿತಿಯನ್ನು ಮನೆಗೆ ಮನೆಗೆ ತಲುಪಿಸಲಾಗಿತ್ತು. ಳುಹರ್ ಬಾಂಗ್ ಆದ ತಕ್ಷಣ ಕುತುಬಾ ಹಾಗೂ ನಮಾಝ್ ಚುಟುಕಾಗಿ ನಿರ್ವಹಿಸಿ ತಕ್ಷಣವೇ ಮಸೀದಿಯಿಂದ ನಿರ್ಗಮಿಸಲಾಯಿತು.
ಹೊಸ ಖತೀಬರ ನೇಮಕ: ಈ ಹಿಂದಿನ ಉಸ್ತಾದರ ನಿರ್ಗಮನದಿಂದ ಖಾಲಿಯಿದ್ದ ಖತೀಬ್ ಹುದ್ದೆಗೆ ಮುಹಮ್ಮದ್ ಹಾರಿಸ್ ಮುಸ್ಲಿಯಾರ್ ರನ್ನು ನೇಮಕ ಮಾಡಲಾಯಿತು. ರೆಂಜಲಾಡಿ, ಕಲ್ಲೇಗ, ಊಜಂಬಾಡಿ, ಹೀರೆಬಂಡಾಡಿ ಮುಂತಾದ ಪ್ರತಿಷ್ಠಿತ ಮಸೀದಿಗಳಲ್ಲಿ ಖತೀಬರಾಗಿ ಸೇವೆಗೈದ ಅನುಭವ ಹೊಂದಿರುವ ಇವರು ಕಡಬ ತಾಲೂಕಿನ ಮರ್ದಳ ನಿವಾಸಿಯಾಗಿರುತ್ತಾರೆ. ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಂ ಇದರ ಹಾಲಿ ಅಧ್ಯಕ್ಷರೂ ಆಗಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.