(www.vknews.com) : ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ, ಎಸ್ಸೆಸ್ಸಫ್ ಮಂಚಿ ಸೆಕ್ಟರ್ ವತಿಯಿಂದ ಮಂಚಿ ಸರ್ಕಾರಿ ಪ್ರೌಢಶಾಲೆ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
SSF ಮಂಚಿ ಸೆಕ್ಟರ್ ವತಿಯಿಂದ ದಿನಾಂಕ 21-06-2020 ಆದಿತ್ಯವಾರದಂದು ಸರ್ಕಾರಿ ಪ್ರೌಢ ಶಾಲೆ ಮಂಚಿ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷರಾದ ಝುಬೈರ್ ಸಂಪಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುನ್ನೀ ಮಹಲ್ ಸಾರಥಿ ಶೈಖುನಾ ಎಣ್ಮೂರು ಉಸ್ತಾದ್ ರವರು ದುಆ ನಡೆಸಿದರು.SYS ಮಂಚಿ ಬ್ರಾಂಚ್ ಅಧ್ಯಕ್ಷರಾದ ಬದ್ರುದ್ದೀನ್ ಹಾಜಿ ಮಂಚಿ ಉದ್ಘಾಟನೆಗೈದು ಸಂಘಟನೆಯ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ SSF ದ.ಕ ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮಿ, ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ, SSF ಬಂಟ್ವಾಳ ಡಿವಿಷನ್ ಕೋಶಾಧಿಕಾರಿ ಅಸ್ಲಂ ಸಂಪಿಲ, ಡಿವಿಷನ್ ಉಪಾಧ್ಯಕ್ಷರಾದ ಹಂಝ ಮಂಚಿ, SSF ಮಂಚಿ ಸೆಕ್ಟರ್ ಉಸ್ತುವಾರಿ ಇಬ್ರಾಹಿಂ ಸುರಿಬೈಲ್, SYS ಮಂಚಿ ಬ್ರಾಂಚ್ ಸದಸ್ಯರಾದ ಮಹಮ್ಮದ್ ಮಂಚಿ , ಮಂಚಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಇಬ್ರಾಹಿಂ ಮಂಚಿ-ಕೊಳ್ನಾಡು, SSF ಮಂಚಿ ಸೆಕ್ಟರ್ ಕೋಶಾಧಿಕಾರಿ ಜಾಬಿರ್ ಪಡ್ಪು ಹಾಗೂ ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಸೆಕ್ಟರ್ ವ್ಯಾಪ್ತಿಯ ಶಾಖೆಗಳ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿ, ಸೆಕ್ಟರ್ ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.