ಬಂಟ್ವಾಳ (www.vknews.com) : ಕರಾವಳಿಯ ಕೋಮು ಸಾಮರಸ್ಯವನ್ನು ಕಾಯ್ದುಕೊಳ್ಳಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ನ ರಾಜ್ಯ ಉಪಾಧ್ಯಕ್ಷ ಎಸ್.ಅಬೂಬಕ್ಕರ್ ಸಜೀಪ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಗೋ ರಕ್ಷಕರು, ಮಾಂಸ ರಕ್ಷಕರು ಎಂಬ ಹೆಸರಿನಲ್ಲಿ ಮಂಗಳೂರಿನಲ್ಲಿ ಅಮಾಯಕರ ಮೇಲೆ ಒಂದು ಸಂಘಟನೆಯ ಕಾರ್ಯಕರ್ತರು ರಾತ್ರಿಯ ಸಮಯಗಳಲ್ಲಿ ಹೊಂಚುಹಾಕಿ ಹಲ್ಲೆ ನಡೆಸುತ್ತಿರುವುದು ಕರಾವಳಿಯ ಶಾಂತಿಯನ್ನು ಕದಡುವ ಹುನ್ನಾರವಾಗಿದೆ, ಇಂತಹ ದುಷ್ಕ್ರತ್ಯವನ್ನು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ತೀವ್ರವಾಗಿ ಖಂಡಿಸುತ್ತದೆ.
ಇಂತಹಾ ಸಮಾಜ ಘಾತುಕ ಶಕ್ತಿಗಳನ್ನು ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ ಬಂಧಿಸಿ ಮಟ್ಟಹಾಕಬೇಕಿದೆ ಎಂದವರು ಸಜೀಪ ಆಗ್ರಹಿಸಿದ್ದಾರೆ.
ಇಂತಹ ಘಟಣೆಗಳು ನಡೆದಾಗ ಇಲಾಖೆ ಕೈಗೊಳ್ಳುವ ಸಡಿಲವಾದ ಕಾನೂನು ಕ್ರಮಗಳಿಂದಾಗಿ ಕಿಡಿಗೇಡಿಗಳು ದಿನದಿಂದ ದಿನಕ್ಕೆ ತಮ್ಮ ದುಷ್ಕ್ರತ್ಯವನ್ನು ಹೆಚ್ಚಿಸಲು ಪ್ರೇರಣೆ ನೀಡಿದಂತಾಗುತ್ತಿದೆ ಘಟನೆಗಳು ಇದೇ ತರಹ ಪುನರಾವರ್ತನೆಯಾದಲ್ಲಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವತಿಯಿಂದ ರಾಜ್ಯಾಧ್ಯಂತ ತೀವ್ರವಾದ ಹೋರಾಟವನ್ನು ಮಾಡಲಾಗುವುದು ಎಂದವರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.