www.vknews.in.ಮಂಗಳೂರು:-ಇಲ್ಲಿನ ಮಂಗಳೂರು ಘಟಕದ ಗೃಹರಕ್ಷಕ ಸಿಬ್ಬಂದಿ ಜಯರಾಮ್(HG806) ಇವರು ಪ್ರಸ್ತುತ ಪಣಂಬೂರು ಸಮುದ್ರ ಕಿನಾರೆಯಲ್ಲಿ ಪ್ರವಾಹರಕ್ಷಣಾ ಕರ್ತವ್ಯ ನಿರ್ವಹಿಸುತ್ತಿದ್ದು ಮದ್ಯಾಹ್ನ ಊಟಕ್ಕೆ ತೆರಲುವಾಗ ಕೂಳೂರು ಸೇತುವೆ ಬಳಿ ಪರ್ಸ್ ಬಿದ್ದು ಸಿಕ್ಕಿರುತ್ತದೆ ಪರ್ಸ್ ನಲ್ಲಿ ನಗದು,ವಾಹನ ಪರವಾನಿಗೆ, ಆಧಾರ್ ಕಾರ್ಡ್,ಚಾಲನಾ ಪರವಾನಿಗೆ ಸಹಿತ ಅಮೂಲ್ಯ ದಾಖಲೆಗಳು ಇರುತ್ತವೆ ನಂತರ ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ನಲ್ಲಿದ್ದ ಸಂಖ್ಯೆಯ ಮೂಲಕ ಕರೆಮಾಡಿದಾಗ ಸಾಮಾಜಿಕ ಕಾರ್ಯಕರ್ತರು ಉದ್ಯಮಿಗಳಾದ ಹನುಮಂತ್ ಕಾಮತ್ ರವರಿಗೆ ಸಂಭದ ಪಟ್ಪ ಪರ್ಸ್ ಆಗಿರುತ್ತದೆ ನಂತರ ಕಳೆದುಕೊಂಡ ಪರ್ಸನ್ನು ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರ ಸಮ್ಮುಖದಲ್ಲಿ ಪರ್ಸನ್ನು ಹನುಮಂತ್ ಕಾಮತ್ ರವರಿಗೆ ಹಸ್ತಾಂತರ ಮಾಡಲಾಯಿತು ಈ ವೇಳೆಗೆ ಪರ್ಸ್ ಮಾಲಿಕರು ಪ್ರಾಮಣಿಕತೆ ಮೆರೆದ ಗೃಹರಕ್ಷಕನಿಗೆ 1,000 ನಗದು ಬಹುಮಾನ ನೀಡಿ ಗೃಹರಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಕೂಡಾ ಗೃಹರಕ್ಷಕನನ್ನು ಪ್ರಶಂಸಿರುತ್ತಾರೆ ಈ ಸಂಧರ್ಭದಲ್ಲಿ ಜಿಲ್ಲಾ ಸಮಾದೇಷ್ಠರ ಜೀಪು ಚಾಲಕ ದಿವಾಕರ್ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.