ಈಶ್ವರಮಂಗಲ (www.vknews.com) : ಸಮುದಾಯದ ಪರಮೋನ್ನತ ವಿಶ್ವ ಉಲಮಾ ಒಕ್ಕೂಟ ಸಮಸ್ಥ ಕೇರಳ ಜಂಯ್ಯತುಲ್ ಉಲಮ ಇದರ ಸ್ಥಾಪಕ ದಿನಾಚರಣೆಯ ಭಾಗವಾಗಿ ಒಕ್ಕೂಟದ ವಿದ್ಯಾರ್ಥಿ ವಿಭಾಗವಾದ ಎಸ್ ಕೆ ಎಸ್ ಎಸ್ ಪಾಳ್ಯತಡ್ಕ ಶಾಖೆಯ ವತಿಯಿಂದ ಉಚಿತ ಮದ್ರಸಾ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ಹತ್ತು ಸಾವಿರಕ್ಕೂ ಮಿಕ್ಕಿ ಮದ್ರಸಾಗಳು, 12 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಒಂದು ಲಕ್ಷಕ್ಕೂ ಮಿಕ್ಕಿ ಅಧ್ಯಾಪಕರು, ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯ ದಂತಹ ವಿಶ್ವೊತ್ತರ ಮಾನ್ಯತೆ ಪಡೆದ ಸಾವಿರಾರು ವಿದ್ಯಾಸಂಸ್ಥೆಗಳನ್ನು ಒಳಗೊಂಡ ವಿಶ್ವದಲ್ಲೇ ಸರಿಸಾಟಿ ಇಲ್ಲದ ಉಲಮಾ ಒಕ್ಕೂಟ ಇದೀಗ ಸ್ಥಾಪಕ ದಿನದ ಸಂಭ್ರಮದಲ್ಲಿದೆ. ಕಾಲಘಟ್ಟಕ್ಕೆ ತಕ್ಕಂತೆ ಯೂಟ್ಯೂಬ್ ಮತ್ತು ಇತರ ಚಾನೆಲ್ಗಳಲ್ಲಿ ಆನ್ಲೈನ್ ತರಗತಿ ಆರಂಭಿಸಿದ್ದು ಸಕಾಲಿಕ ಮತ್ತು ಸಮಕಾಲೀನ ಕಾಲಘಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ದೈನಂದಿನ 15 ಲಕ್ಷ ಮಂದಿ ವೀಕ್ಷಿಸುತ್ತಿದ್ದು ವಿದ್ಯಾರ್ಥಿಗಳ ಮನದಲ್ಲಿ ನೂತನ ಹೆಜ್ಜೆಗುರುತು ಮಾಡಿದೆ.
ಪಾಲ್ಯ ತಡ್ಕ ಶಾಖೆಯು ಈ ಮುಂದೆಯೂ ಕೂಡ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಲೌಕಿಕ ಕಾರ್ಯಕ್ರಮಗಳಲ್ಲಿ ತೊಡಗಿ ಜನಪ್ರಿಯವಾದುದು ಇಲ್ಲಿ ಸ್ಮರಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಯತಡ್ಕ ಜುಮ್ಮಾ ಮಸೀದಿ ಅಧ್ಯಕ್ಷರಾದ ತೈವಳಪ್ಪ್ ಮೊಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಈಶ್ವರಮಂಗಲ ಕ್ಲಸ್ಟರ್ ಅಧ್ಯಕ್ಷರಾದ ಖಲೀಲ್ ರಹ್ಮಾನ್ ಅರ್ಷದಿ ಯವರ ಸ್ವಾಗತದೊಂದಿಗೆ ಸ್ಥಳೀಯ ಖತೀಬ್ ಇಸ್ಹಾಕ್ ದಾರಿಮಿ ಪ್ರಾರ್ಥನೆ ಗೈದು ಉದ್ಘಾಟಿಸಿದರು, ಕುಂಬ್ರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಿರಾ ಅಬ್ದುಲ್ ಖಾದರ್ ಹಾಜಿ, ಪ್ರತಿಷ್ಠಿತ ಉದ್ಯಮಿ ಎನ್ ಎಸ್ ಅಬ್ದುಲ್ಲಾ ಹಾಜಿ, ಮಸೀದಿ ಉಪಾಧ್ಯಕ್ಷರಾದ ಮಹಮ್ಮದ್ ಮುಸ್ಲಿಯಾರ್, ಕೋಶಾಧಿಕಾರಿ ಯೂಸುಫ್ ಹಾಜಿ,ಜಮಾಅತ್ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಹಾಜಿ, ಇಬ್ರಾಹಿಂ ಕುಕ್ಕಾಜೆ,ಶಾಖಾ ಅಧ್ಯಕ್ಷರಾದ ಬಶೀರ್ ವಹಬಿ,ಶಂಸುಲ್ ಉಲಮಾ ಋತುವಿನ ಕಾರ್ಯದರ್ಶಿ ಇಕ್ಬಾಲ್,ವಿಖಾಯ ಕನ್ವೀನರ್ ಶಂಸುದ್ದೀನ್,ಅಬ್ದುಲ್ಲ ಹಾಜಿ ಈಶ್ವರಮಂಗಲ,ಮೇನಾಲ ಶಾಖ ಅಧ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್, ಸಂಘಟನಾ ಕಾರ್ಯದರ್ಶಿ ರಶೀದ್ ಮುಂಚಿಕಾನ, ಶುಭಹಾರೈಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ನಿತರ ಹಲವಾರು ಗಣ್ಯರು, ಜಮಾಅತ್ ಪ್ರತಿನಿಧಿಗಳು, ಶಂಸುಲ್ ಉಲಮಾ ಯೂತ್ ವಿಂಗ್ ಪದಾಧಿಕಾರಿಗಳು, ಎಸ್ ಕೆ ಎಸ್ ಎಸ್ ಎಫ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು,
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.