ಕಾರ್ಕಳ (www.vknews.com) : ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ ರವರ ಸಹೋದರರಾದ ಶುಶಾಂತ್ ಪೂಜಾರಿ ( ಡಿಗ್ರಿ ವಿಧ್ಯಾರ್ಥಿ), ಸುಮಂತ್ ಪೂಜಾರಿ ( ಮೇಕಾನಿಕಲ್ ಎಂಜಿನಿಯರಿಂಗ್ ವಿಧ್ಯಾರ್ಥಿ) , ಸುಜಿತ್ ಪೂಜಾರಿ ( ಪ್ರಥಮ ಪಿ. ಯು. ಸಿ ವಿಜ್ಞಾನ ವಿಭಾಗದ ವಿಧ್ಯಾರ್ಥಿ) ಈಗ ಕೊರೋನಾ ದಿಂದ ಕಾಲೇಜುಗಳಿಗೆ ರಜೆ ಇರುವುದರಿಂದ ಈ ಯುವಕರು ಸಮಯ ವನ್ನು ವ್ಯರ್ಥಮಾಡದೆ ತಮ್ಮ ಚಿತ್ತವನ್ನು ಕೃಷಿಯತ್ತ ಹರಿಸಿದ್ದು, ಯುವಜನರಿಗೆ ಮಾದರಿ ಎನಿಸುತ್ತಿದ್ದಾರೆ. ಕಂಬಳಕ್ಕೆ ಎಂದು ಕೋಣಗಳನ್ನು ಸಾಕುತ್ತಿರುವ ಬೋಳ ಹೊಸಮನೆಯಲ್ಲಿ ಈಗ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ಮನೆಯ ಎಲ್ಲ ಸದಸ್ಯರು ಕೆಲಸದಲ್ಲಿ ತೊಡಗಿಸಿಕೋಡಿದ್ದಾರೆ.
ಈ ಮೂವರು ಯುವಕರು ಕೆಸರು ಗದ್ದೆಯಲ್ಲಿ ಕೋಣಗಳ ಮೂಲಕ ಉಳುಮೆ ಮಾಡಿ ಸಂಪ್ರದಾಯ ಕೃಷಿ ಆಚರಣೆಯ ಜೊತೆಗೆ ಸಂತೋಷದಿಂದ ಸಂಭ್ರಮಪಟ್ಟರು . ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದೆ ಈಗ ಕೃಷಿ ಅಂತ ಹೆಚ್ಚು ಹೆಚ್ಚು ಜನ ವಾಲುತ್ತಾ ಇದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.