(www.vknews.com) : ಮಂಗಳೂರಿನ ಅತ್ತಾವರ ನಿವಾಸಿ ಉಮೇಶ್ ಸಾಲ್ಯಾನ್ (62 ವರ್ಷ) ಪಿತ್ತಕೋಶ ಕ್ಯಾನ್ಸರ್ನಿಂದ ಬಳಲುತ್ತಿದ್ದು, ನಗರದ ಇಂಡಿಯಾನ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರುವ ಒಬ್ಬನೇ ಕೂಲಿ ಕಾರ್ಮಿಕ ಮಗ ಚಿಕಿತ್ಸೆಗೆ ಹಣ ಬರಿಸಲಾಗದೆ ಸಂಕಷ್ಟದಲ್ಲಿದ್ದಾನೆ.
ಈ ಮೊದಲು ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಉಮೇಶ್ ಸಾಲ್ಯಾನ್ ರವರು, ಇದೀಗಾಗಲೇ ಇರುವ ಆಸ್ತಿ, ಮನೆ ಎಲ್ಲವನ್ನೂ ಮಾರಿದ್ದಾರೆ.ಚಿಕಿತ್ಸೆಯ ಹಣಕ್ಕಾಗಿ, ಸಾಲ ಮತ್ತು ಲೋನ್ ಕೂಡ ಪಡೆದಿರುವ ಇವರು ಈಗ ಸಂಪೂರ್ಣ ಅತಂತ್ರರಾಗಿದ್ದಾರೆ.
ರೋಗಿಯ ಕೀಮೋಥೆರಪಿಯಾದ ನಂತರ, ಎರಡೂ ಕಾಲುಗಳು ಬಾತುಕೊಂಡು ಗಾಯಗಳಾಗಿ ಆಪರೇಷನ್ ಮಾಡಬೇಕಾದ ಸ್ಥಿತಿಯಿದ್ದರೂ, ಮದುಮೇಹದ ಕಾರಣದಿಂದ ಶಸ್ತ್ರಚಿಕಿತ್ಸೆಯನ್ನು ಒಂದು ತಿಂಗಳ ಮಟ್ಟಿಗೆ ವೈದ್ಯರು ಮುಂದೂಡಿದ್ದಾರೆ.
ಈಗಾಗಲೇ ವೈದ್ಯರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಂತೆ ಹೇಳಿದ್ದರೂ, ಬಿಲ್ ಪಾವತಿಸುವಷ್ಟು ಹಣವಿಲ್ಲದೆ ಉಮೇಶ್ ರವರು ಡಿಸ್ಚಾರ್ಜ್ ಆಗದೆ ಆಸ್ಪತ್ರೆಯಲ್ಲೇ ಉಳಿದಿದ್ದಾರೆ. ದುಡ್ಡು ಪಾವತಿಯಾಗದಿರುವುದರಿಂದ ಆಸ್ಪತ್ರೆಯ ಫಾರ್ಮಸಿಯವರು ಔಷಧಿ ನೀಡುವುದನ್ನೂ ನಿಲ್ಲಿಸಿದ್ದಾರೆ.
ಈ ವಿಷಮ ಪರಿಸ್ಥಿತಿಯಲ್ಲಿರುವ ಬಡ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಬಿ-ಹ್ಯೂಮನ್ ತಂಡ ಮುಂದಾಗಿದೆ. ದಾನಿಗಳಾದ ತಾವು ಜೀವ ಉಳಿಸುವ ಈ ಪುಣ್ಯದಾಯಕ ಕಾರ್ಯದಲ್ಲಿ ಕೈ ಜೋಡಿಸಿ ಈ ನಿರ್ಗತಿಕ ಕುಟುಂಬಕ್ಕೆ ಆಸರೆಯಾಗಬೇಕಾಗಿ ವಿನಂತಿಸುತ್ತೇನೆ.
ಅತಂತ್ರ ಸ್ಥಿತಿಯಲ್ಲಿರುವ ಉಮೇಶ್ ಸಾಲ್ಯಾನ್ ಕುಟುಂಬಕ್ಕೆ ನೆರವು ನೀಡಲಿಚ್ಚಿಸುವವರು ಈ ಕೆಳಗಿನ ಅಕೌಂಟ್ ನಂಬರ್ ಮೂಲಕ ದಾನ ಮಾಡಬಹುದಾಗಿದೆ.
Contact # * Team B-Human * * 9880012388 *
http://www.b-human.in
GOOGLEPAY / PHONEPE / PAYTM: +919880012388 OR B-Human @ upi __________ B HUMAN AC.No- 510101006627935 CORPORATION BANK IFSC: CORP0000078 Kankanady Branch, Mangalore ……… www.b-human.in/ www.facebook.com/b.humanmlore/
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.