ಪುತ್ತೂರು (www.vknews.com) : SKSSF ಕಾವು ಶಾಖೆ ವತಿಯಿಂದ ಎಸೆಸೆಲ್ಸಿ ಪರೀಕ್ಷಾ ಸಾಧಕ ವಿದ್ಯಾರ್ಥಿಗಳಿಗೆ ಶರೀಫ್ ಮುಬಾರಕ್ ರವರ ಅಧ್ಯಕ್ಷತೆ ಇಂದ ಸನ್ಮಾನ ಮಾಡಲಾಯಿತು. ಕಾವು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶುಕೂರ್ ದಾರಿಮಿ ಉಸ್ತಾದ ರವರು ಕಾರ್ಯಕ್ರಮಕ್ಕೆ ದುವಾ ನೆರವೇರಿಸಿದರು. ಸಫ್ವಾನ್ ಅವರು ಕಿರಾಅತೌ ಪಠಿಸಿದರು ಹಾಗೂ ಫಾರೂಕ್ ದಾರಿಮಿ ಉಸ್ತಾದರವರು ಸ್ವಾಗತ ನೆರವೇರಿಸಿದರು.
ಶುಕೂರ್ ದಾರಿಮಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ, ಮೊಹಮ್ಮದ್ ಬಾಸಿತ್ ಮತ್ತು ಬಿಎ ಅಸೀಮ ರವರಿಗೆ ಸನ್ಮಾನ ಮಾಡಲಾಯಿತು. ಅಬ್ದುಲ್ ರವೂಫೌ ರವರು ಕಾರ್ಯಕ್ರಮಕ್ಕೆ ಎಂಸಿ ಮಾಡಿದರು.
ವೇದಿಕೆಯಲ್ಲಿ ಅಬ್ದುಲ್ ಅಜೀಜ್ ಬುಶ್ರಾ, ಅಬ್ಬಾಸ್ ಮುಸ್ಲಿಯಾರ್ , ಹುಸೈನ್ ಹಾಜಿ, ಅಬ್ದುರ್ರಹ್ಮಾನ್ ಫೈಜಿ, ಜಬ್ಬರ್ ಯಮಾನಿ, ಮೊಹಮ್ಮದ್ ಪಿಎಂ, ಮೊಹಮ್ಮದ್ ಏಕೆ, ಉಮ್ಮರ್ ಮಿನಾರ್, ಮೊಹಮ್ಮದ್ ಪಿ, ಇಜುಉದ್ದಿನ್ ಮುಸ್ಲಿಯಾರ್, ಅಜೀಜ್ ಎಂಎಚ್ ಹಾಗೂ ಶಾಹುಲ್ ಹಮೀದ್ ರವರು ಉಪಸ್ಥಿತರಿದ್ದರು.
ಅಂತಿಮವಾಗಿ ಶರೀಫ್ ರವರು ಕಾರ್ಯಕ್ರಮಕ್ಕೆ ಧನ್ಯವಾದಗಳನ್ನು ಹೇಳಿ ಕಾರ್ಯಕ್ರಮವನ್ನು ಕೊನೆಗೊಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.