ಕಡಬ<strong (www.Vknews.in):ಕೋವಿಡ್-19 ಕೊರೋನಾ ಸೋಂಕಿನಿಂದ ಮೃತಪಟ್ಟ ಕಡಬ ತಾಲೂಕಿನ ಪೆರ್ಲದಕೆರೆ ಮೂಲದ ವ್ಯಕ್ತಿಯ ಅಂತ್ಯ ಸಂಸ್ಕಾರ ಕಾರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸರ್ಕಾರದ ಎಲ್ಲಾ ಮಾರ್ಗಸೂಚಿ ಮತ್ತು ಮುಂಜಾಗೃತಾ ಕ್ರಮವನ್ನನುಸರಿಸಿ ಅತ್ಯಂತ ಗೌರವಯುತವಾಗಿ ಸಂಸ್ಕಾರವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಿದ್ದೀಕ್ ನೆಲ್ಯಾಡಿ ನೇತೃತ್ವದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಬ ವಲಯದ ಕೊರೋನಾ ವಾರಿರ್ಯಸ್ ತಂಡದ ನೌಷದ್ ಕಡಬ, ಸಮದ್ ಕೊಡಿಂಬಾಲ, ನವಾಜ್ ಕಡಬ, ಷರೀಫ್ ಕಡಬ ಹಾಗೂ ಮೃತ ವ್ಯಕ್ತಿಯ ಕುಟುಂಬಸ್ಥರ ಸಹಕಾರದಿಂದ ಹಿಂದೂ ಸಮುದಾಯದ ಧಾರ್ಮಿಕ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಅಂತ್ಯಕ್ರಿಯೆನ್ನು ಕಡಬದ ಪೆರ್ಲದಕೆರೆಯಲ್ಲಿ ನಡೆಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.