ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):ಹಿರಿಯ ವಿದ್ವಾಂಸರಾಗಿರುವ, ಸಮುದಾಯದ ಮತ್ತು ಸಮಾಜದಲ್ಲಿನ ಸೇವೆಯಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದ,ಉಡುಪಿ ಚಿಕ್ಕಮಗಳೂರು-ಕೊಡಗು-ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಯವರಾದ ಬಹುಮಾನ್ಯರಾದ ‘ಬೇಕಲ್ ಉಸ್ತಾದ್’ ರೆಂದೇ ಪ್ರಸಿದ್ದಿ ಪಡೆದ ಶೈಖುನಾ ಇಬ್ರಾಹಿಂ ಮುಸ್ಲಿಯಾರ್ ಬೇಕಲವರ ಮರಣವು, ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ, ಒಟ್ಟು ನಾಗರಿಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಸಮಾಜಮುಖಿ ಕೆಲಸಕಾರ್ಯಗಳು ಯಾವುದೇ ನಿರ್ದಿಷ್ಟ ವರ್ಗಕ್ಕೆ, ಸೀಮಿತವಾಗಿರದೆ ಮಾನವೀಯ ನೆಲೆಯಿಂದ ಕೂಡಿದ್ದವು.ಅವರ ಆಗಲಿಕೆಯು ವೈಯುಕ್ತಿಕವಾಗಿ ನನಗೆ ಬಹಳ ಆತ್ಮೀಯತೆಯನ್ನು ಹೊಂದಿದ್ದ ಒಬ್ಬ ಗುರುಗಳನ್ನು ಕಳೆದುಕೊಂಡ ಶೂನ್ಯತೆಯನ್ನು ಮೂಡಿಸಿದೆ,ಅವರೊಂದಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಅನ್ಯೋನ್ಯತೆಯನ್ನು ಹೊಂದಿದ್ದಲ್ಲದೆ, 2000 ದ ಸಾಲಿನ ಹಜ್ಜ್ ಯಾನದ ನಮ್ಮ ತಂಡದ ನೇತೃತ್ವವನ್ನು ವಹಿಸಿದ್ದ ಅವರ ಸೌಮ್ಯ ಸ್ವಭಾವ, ಪ್ರೀತಿ ಭಾಂಧವ್ಯ ಸ್ನೇಹಮಯ ವ್ಯಕ್ತಿತ್ವದ ಮತ್ತು ಅವರು ನೀಡುತ್ತಿದ್ದ ಉತ್ತಮ ಮಾರ್ಗದರ್ಶನದ ಪ್ರಭಾವದಿಂದ ಬಹಳ ಆತ್ಮೀಯತೆಯನ್ನು ಬೆಳೆಸಿತು. ಅಂದು ಅವರ ಜತೆಯಲ್ಲಿ ತಾಜುಲ್ ಉಲಮಾ ಮರ್ಹೂಂ ಉಳ್ಳಾಲ ತಂಙಲ್ ಕೂಡಾ ಇದ್ದರು ಎಂದು ನೆನಪಿಸಿಕೊಂಡ, ಎಸ್. ಎಂ. ರಶೀದ್ ಹಾಜಿಯವರು ಬೇಕಲ್ ಉಸ್ತಾದ್’ ರವರ ನಿಧನಕ್ಕೆ ಅತೀವ ದುಃಖವನ್ನು ವ್ಯಕ್ತ ಪಡಿಸಿದರು.
ರಶೀದ್ ಹಾಜಿ
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.