ಲಂಡನ್ (ವಿಶ್ವಕನ್ನಡಿಗ ನ್ಯೂಸ್):ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟನ್ ನ್ಯಾಯಾಲಯ ಡಾ|ಬಿಆರ್ ಶೆಟ್ಟಿಯ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದೆ.ವಂಚನೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಎನ್ಎಂಸಿ ಸಂಸ್ಥಾಪಕರಾದ ಡಾಕ್ಟರ್ ಬಿ ಆರ್ ಶೆಟ್ಟಿ ಹಾಗೂ ಮಾಜಿ ಸಿಇಒ ಪ್ರಶಾಂತ್ ಮಂಗಟ್ ಸಹಿತ ಹಲವರ ಜಗತ್ತಿನ ಯಾವ ಮೂಲೆಯಲ್ಲಿಯೂ ಇರುವ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದೆ.
ಕೋಟ್ಯಾಂತರ ರೂಪಾಯಿ ವಂಚನೆ ಆರೋಪವನ್ನ ಹೊರಿಸಿರುವ ಎಡಿಸಿಬಿ ಬ್ಯಾಂಕ್ ದೂರನ್ನ ಆಲಿಸುತ್ತಿರುವ ಲಂಡನ್ ಕೋರ್ಟ್ ಆದೇಶವನ್ನು ನೀಡಿದೆ.
ಡಾ.ಬಿಆರ್ ಶೆಟ್ಟಿಯವರನ್ನು ಬಂಧಿಸುವ ಸನಿಹಕ್ಕೆ ಈ ಆದೇಶ ಕಾರಣವಾಗುತ್ತದಾ ಎಂಬುದನ್ನು ಕಾದುನೋಡಬೇಕಾಗಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.