ಜೆದ್ದಾ(www.vknews.in):ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್-ರಾಜಿ ಅವರು ರೆಸ್ಟೋರೆಂಟ್ಗಳು, ಕೆಫೆಗಳು, ಹೈಪರ್ಮಾರ್ಕೆಟ್ಗಳು ಮತ್ತು ಮಾಲ್ಗಳಲ್ಲಿನ ವೃತ್ತಿಗಳನ್ನು ಸೌದಿ ಪ್ರಜೆಗಳಿಗೆ ಮೀಸಲು ಗೊಳಿಸುವ ನಿರ್ಧಾರವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಜನವರಿಯಲ್ಲಿ ಕಾರ್ಮಿಕ ಮಾರುಕಟ್ಟೆಗೆ ಪ್ರವೇಶಿಸಿದ ಸೌದಿ ಯುವಕ-ಯುವತಿಯರ ಸಂಖ್ಯೆ 28,000 ಮೀರಿದೆ ಎಂದ ಅವರು “ ನಾವು ಎಲ್ಲಾ ಕ್ಷೇತ್ರಗಳ ವೃತ್ತಿಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಮತ್ತು ದೇಶದ ಯುವಕ ಯುವತಿಯರಿಗೆ ಉದ್ಯೋಗವನ್ನು ಒದಗಿಸಲು ನಾವು ಎಲ್ಲಾ ಕಟುಬದ್ಧರಾಗಿದ್ದೇವೆ.ಕಾನೂನು ಮತ್ತು ಶೈಕ್ಷಣಿಕ ಕ್ಷೇತ್ರವನ್ನೂ ಸ್ಥಳೀಕರಿಸುವ ನಿರ್ಧಾರವನ್ನು ನಾವು ಶೀಘ್ರದಲ್ಲೇ ಜಾರಿಗೆ ತರುತ್ತೇವೆ ”ಎಂದು ಅಲ್-ರಾಜಿ ಅವರು ಗುತ್ತಿಗೆದಾರರ ರಾಷ್ಟ್ರೀಯ ಸಮಿತಿ ಮತ್ತು ಕನ್ಸಲ್ಟಿಂಗ್ ವೃತ್ತಿಗಳ ರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಹೇಳಿದ್ದಾರೆ.
ಭಾರತೀಯರೇ ಹೆಚ್ಚಾಗಿರುವ ರೆಸ್ಟೋರೆಂಟ್,ಕೆಫೆ,ಶಾಪಿಂಗ್ ಮಾಲ್ ಹಾಗೂ ಹೈಪರ್ ಮಾರ್ಕೆಟ್ ಕ್ಷೇತ್ರಗಳಲ್ಲಿನ ಸೌದೀಕರಣದಿಂದಾಗಿ ಲಕ್ಷಾಂತರ ಭಾರತೀಯರು ಸೇರಿದಂತೆ ಕೋಟ್ಯಾಂತರ ವಿದೇಶಿಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.