(www.vknews.com) : ಬೆಳ್ತಂಗಡಿಯ ತೀರಾ ಹತ್ತಿರವಿರುವ ಪ್ರತಿಷ್ಠಿತ ಊರು ಉಜಿರೆ. ಇಲ್ಲಿನ ನಿವಾಸಿ ಅಬ್ದುಲ್ ರಝಾಕ್. ಇದೀಗ ದುಬೈಯ ಅನಿವಾಸಿ ಭಾರತೀಯ. ಕಳೆದ 13 ವರ್ಷಗಳಿಂದ ದುಬೈ ವಾಸ. ಅಲ್ ಸೀರ್ ಎಂಬ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ.
ಪತ್ನಿ ಮಕ್ಕಳ ಜೊತೆಗಿದ್ದರೂ ಬಿಡುವಿನ ಸಮಯ ಮಾನವೀಯ ಸೇವೆಗಾಗಿ ಮೀಸಲು. ಇದು ಇವರ ವಿಶೇಷತೆ. ಎಲ್ಲೆಲ್ಲೂ ಸ್ವಾರ್ಥವೇ ತುಂಬಿ ತುಳುಕುತ್ತಿರುವ ಸಂಧರ್ಭದಲ್ಲಿ ಇಂತಹ ವ್ಯಕ್ತಿಗಳು ಕಾಣಸಿಗುವುದು ಬಹಳ ಅಪರೂಪ. ಅದಾಗಲೇ ಕೋವಿಡ್ ಸಂಧರ್ಭದಲ್ಲಿ ಸ್ವ ರಕ್ಷಣೆಗಾಗಿ ಪ್ರತಿಯೊಬ್ಬರೂ ಆದ್ಯತೆ ನೀಡುತ್ತಿದ್ದ ಸಮಯ. ಆಗ ರಝಾಕ್ ರವರ ಮಾನವೀಯ ಗುಣಗಳು ಹೊರಬಂದ, ಆ ಅಪೂರ್ವ ಕ್ಷಣಗಳನ್ನು ಶಬ್ದಗಳಲ್ಲಿ ವಿವರಿಸಲು ಅಸಾಧ್ಯ. ಗಲ್ಫ್ ನಾದ್ಯಂತ ವಿಶೇಷವಾಗಿ ಅತೀ ಹೆಚ್ಚು ಪ್ರಸಾರಿಸಲ್ಪಡುವ ಪತ್ರಿಕೆ. “ಗಲ್ಫ್ ನ್ಯೂಸ್”. ಇವರ ಸೇವೆಯನ್ನು ಈ ಪತ್ರಿಕೆಯು ಎಳೆ ಎಳೆಯಾಗಿ ವಿವರಿಸಿದೆ. ಅಲ್ಲಿನ ಟಿ.ವಿ.ಯಲ್ಲೂ , ರೇಡಿಯೋದಲ್ಲೂ ಪ್ರಸಾರಿತವಾಗಿದೆ.
ಇದರಿಂದ ಉತ್ತೇಜಿತಗೊಂಡು ಅವರು ಕೆಲವು ತನ್ನ ಸ್ನೇಹಿತರ ಜೊತೆಗೂಡಿ ಇಂದಿಗೂ ನಿರಂತರವಾಗಿ ಆ ಮೌಲ್ಯಗಳನ್ನು ಪಾಲಿಸುವಲ್ಲಿ ತನ್ನದೇ ಆದ ಮಹತ್ತರ ಪಾತ್ರವನ್ನು ವಹಿಸಿರುವುದು. ಇವರ ಹೃದಯ ವೈಶಾಲ್ಯತೆಗೆ ಎತ್ತಿ ಹಿಡಿದ ಕನ್ನಡಿಯಾಗಿದೆ. ಅದೆಷ್ಟೋ ಕುಟುಂಬಗಳು ಕಂಗಾಲಾಗಿ ರೇಷನ್ ಗಾಗಿ, ಊಟಕ್ಕಾಗಿ, ವಸತಿಗಾಗಿ, ಪತ್ನಿ ಮಕ್ಕಳ ಆರೋಗ್ಯಕ್ಕಾಗಿ ಇಂದಿಗೂ ಇವರನ್ನು ಸಂಪರ್ಕಿಸುತ್ತಿದ್ದಾರೆ. ಮಾತ್ರವಲ್ಲ ದುಬೈಯಿಂದ ವಾಪಾಸಾಗಿ ಭಾರತದಲ್ಲಿದ್ದೂ ಸಂಕಷ್ಟಕ್ಕಾಗಿ ಇವರ ಮೊರೆ ಹೋಗುತ್ತಿದ್ದಾರೆ.
ಎಷ್ಟೇ ಕಾರ್ಯನಿಬಿಡತೆಯಲ್ಲಿದ್ದರೂ ಅವರೊಂದಿಗೆ ಹೃದಯವಂತಿಕೆಯನ್ನು ತೋರಿ ಸಾಧ್ಯವಿದ್ದಷ್ಟು ಸಹಾಯವನ್ನು ನೀಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ಬಿಲ್ಲನ್ನು ಮಾಫ್ ಮಾಡಿಸುತ್ತಿದ್ದಾರೆ. ಅಥವಾ ಆದಷ್ಟು ಕಡಿಮೆ ಮಾಡಿಸುತ್ತಿದ್ದಾರೆ. ಇದು ಇವರ ನಿತ್ಯದ ಕಾಯಕವಾಗಿದೆ.
ನನ್ನನ್ನು ಆಗಾಗ ಸಂಪರ್ಕಿಸುತ್ತಿದ್ದು ತನ್ನ ಕಾರ್ಯಕಲಾಪಗಳನ್ನು ವಿವರಿಸುತ್ತಿರುತ್ತಾರೆ. ಮಾನವ ಸೇವೆಯ ಬಗ್ಗೆ ಅವರ ಹೃದಯ ಮಿಡಿತವನ್ನು ಅವರಿಂದಲೇ ಕೇಳಿಸಿಕೊಂಡಲ್ಲಿ ಖಂಡಿತವಾಗಿಯೂ ಅಶ್ರುಧಾರೆಯು ಹರಿಯದೆ ಇರಲಾರದು.
ಕರ್ನಾಟಕದವರೇ ಆದ ಇವರ ಈ ಕಳಕಳಿಯನ್ನು ಕಂಡು ನಮ್ಮ ಕರ್ನಾಟಕ ಸರಕಾರವು ಮಾನವೀಯ ಮೌಲ್ಯಗಳಿಗಾಗಿ ನೀಡುವ ಪ್ರಶಸ್ತಿಯನ್ನು ಇವರಿಗೆ ನೀಡಬೇಕು ಎಂದು ನನ್ನ ಮನದಾಳದ ಬಯಕೆ.
ಅಲ್ಲಾಹು ಇನ್ನಷ್ಟು ಎತ್ತರಕ್ಕೆ ಇವರನ್ನು ಏರಿಸಲಿ. ಇವರು ಕೆಲಸ ಮಾಡುತ್ತಿರುವ ಕಂಪೆನಿಯು ಇವರಿಗೆ ಉನ್ನತ ಮಟ್ಟದ ಜವಾಬ್ದಾರಿಯನ್ನು ನೀಡಲಿ. ತನ್ನ ಸಹಾಯಹಸ್ತವನ್ನು ಇನ್ನಷ್ಟು ವಿಸ್ತರಿಸಲಿಕ್ಕಾಗಿ ವಿಶೇಷಃ ಕರುಣೆಯನ್ನು ಇವರ ಮೇಲೆ ತೋರಲಿ. ಆಮೀನ್.
– ಮೌಲಾನಾ ಅಬ್ದುಲ್ ಹಫೀಝ್, ಅಲ್, ಕಾಸಿಮೀ, ಕಾರ್ಕಳ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.