ಮಂಗಳೂರು(ವಿಶ್ವಕನ್ನಡಿಗ ನ್ಯೂಸ್):ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಿಂದ ಗೋವಾಕ್ಕೆ ಸೈಕ್ಲಿಂಗ್ ಮೂಲಕ ಫೈಝಲ್ ಕಲ್ಲಡ್ಕ, ಅಸ್ಫಾಖ್ ಕಲ್ಲಡ್ಕ,ಅಲ್ತಾಫ್ ತಲಪಾಡಿ ಕೆ.ಸಿ ರೋಉಡುಪರವರು ಮಂಗಳೂರು,ಉಡುಪಿ, ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಸೈಕಲ್ ಮೂಲಕ ಪ್ರಯಾಣ ಮಾಡಿದ್ದಾರೆ. ಕಲ್ಲಡ್ಕದಿಂದ ಗೋವಾಕ್ಕೆ ಸುಮಾರು 385 ಕೀ.ಮಿ ದೂರ ಚಳಿ, ಗಾಳಿ, ಬಿಸಿಲು ಯಾವುದನ್ನು ಲೆಕ್ಕಿಸದೇ ಸೈಕ್ಲಿಂಗ್ ಮೂಲಕ 385 ಕಿ.ಮೀ ಹೋಗುವುದು ಎಂದರೆ ಖಂಡಿತವಾಗಿಯೂ ಕಷ್ಟಕರ . ಯಾವುದನ್ನು ಲೆಕ್ಕಿಸದೇ ಇಟ್ಟ ಗುರಿಯನ್ನು ತಲುಪುವೆವು ಎಂದು ಇಂದು ಮಧ್ಯಾಹ್ನ ಗೋವಾಕ್ಕೆ ತಲುಪಿದ್ದಾರೆ.
ಈ ಮೂವರೂ ಸೈಕ್ಲಿಂಗ್ ಹವ್ಯಾಸ ಬೆಳೆಸಿಕೊಟಡಿದ್ದು ದ.ಕ ಜಿಲ್ಲೆಯ ಉಳ್ಳಾಲ, ಮಂಗಳೂರು, ಸುಳ್ಯ, ಬೆಳ್ತಂಗಡಿ ಇದೇ ರೀತಿ ಎಲ್ಲಾ ಊರುಗಳಿಗೆ ಸೈಕ್ಲಿಂಗ್ ಮೂಲಕ ಪ್ರಯಾಣಿಸುತ್ತಿದ್ದರು.ಜಿಲ್ಲೆಗಳಲ್ಲಿ ತಿರುಗಾಡುತ್ತಿದ್ದ ಈ ಮೂವರು ಯುವಕರು ಇದೀಗ ಜಿಲ್ಲೆಯನ್ನು ಬಿಟ್ಟು ದೂರದ ಗೋವಾ ರಾಜ್ಯಕ್ಕೆ ತಮ್ಮ ಸೈಕ್ಲಿಂಗ್ ಪಯಣಬೆಳೆಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.ಅಲ್ಲದೇ ಇನ್ನೂ ಹಲವಾರು ರಾಜ್ಯಕ್ಕೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ. ಕನಸು ಕಾಣುವುದು ದೊಡ್ಡದಲ್ಲ ಕಂಡ ಕನಸನ್ನು ನನಸಾಗಿಸುವುದೇ ಸಾಧನೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.